ಉಡುಪಿ: ನಗರದ ಪ್ರಸಿದ್ದ ಆರ್ಯುವೇದ ಕ್ಲಿನಿಕ್ ಶ್ರೀನಿಧಿ ಮೆಡಿಕಲ್ಸ್ನ ಮಾಲಕಿ ವಸಂತಿ ಭಟ್ ಕೊರೋನಾ ಸೋಂಕಿಗೆ ತುತ್ತಾಗಿ ಬುಧವಾರ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ವಸಂತಿ ಭಟ್ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಮೃತರು ಆರ್ಯುವೇದ ವೈದ್ಯರಾದ ಪತಿ ಅಲೆವೂರು ಡಾ.ಕೃಷ್ಣರಾಜ್ ಭಟ್, ಇಬ್ಬರು ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.