ವಿಶ್ವ ಏಡ್ಸ್ ದಿನಾಚರಣೆ~ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮದ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರೆಡ್ಕ್ರಾಸ್ ಮತ್ತು ಎನ್.ಎಸ್.ಎಸ್. ಘಟಕ, ಉದ್ಯಾವರ, ಇವರು ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಮತ್ತು ನಾಗರಿಕ ಸಹಾಯವಾಣಿ ಕೇಂದ್ರ, ಉಡುಪಿ ಉದ್ಭವ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬೆಂಗಳೂರು, ಜಿಲ್ಲಾ ಆಸ್ಪತ್ರೆ, ಉಡುಪಿ ಇದರ ಜಂಟಿ ಆಶ್ರಯದಲ್ಲಿ ರಂದು ವಿಶ್ವ ಏಡ್ಸ್ ದಿನ – ೨೦೨೦ ರ ಆಚರಣೆಯನ್ವಯ ನೆರವೇರಿದ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿದರು.
ಶ್ರೀಮತಿ ಕಾವೇರಿ, ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರಿಂದ ಉದ್ಘಾಟಿಸಲ್ಪಟ್ಟ ಜಾಥಾವು ನಗರದ ಸರ್ವಿಸ್ ಬಸ್ ನಿಲ್ದಾಣದಿಂದ ಪ್ರಾರಂಭಗೊಂಡು ಕೆ.ಎಮ್. ಮಾರ್ಗದ ಮೂಲಕ ಟೌನ್ ಹಾಲ್ವರೆಗೆ ಸಾಗಿ ಬಂತು. ಶ್ರೀ ಜಿ. ಜಗದೀಶ್ (ಭಾ.ಆ.ಸೇ), ಮಾನ್ಯ ಜಿಲ್ಲಾಧಿಕಾರಿಗಳು ಇವರಿಂದ ಉದ್ಘಾಟನೆಗೊಂಡ ಸಭಾ ಕಾರ್ಯಕ್ರಮವು ಡಾ. ನವೀನ್ ಭಟ್ (ಭಾ.ಆ.ಸೇ), ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಉಡುಪಿ ಇವರ ಘನ ಅಧ್ಯಕ್ಷತೆಯಲ್ಲಿ ನೆರವೇರಿತು.
ಡಾ. ಸುಧೀರ್ಚಂದ್ರ ಸೂಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಉಡುಪಿ, ಡಾ. ಮಧುಸೂಧನ್ ನಾಯಕ್, ಜಿಲ್ಲಾ ಸರ್ಜನ್, ಉಡುಪಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಯುವ ರೆಡ್ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇದರ ಸುಮಾರು ೬೫ ಉತ್ಸಾಹಿ ಸದಸ್ಯರು ಏಡ್ಸ್ ಬಗ್ಗೆ ಫಲಕಗಳನ್ನು ಪ್ರದರ್ಶಿಸುತ್ತ ಜನರಲ್ಲಿ ಜಾಗೃತಿ ಮೂಡಿಸುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಯುವ ರೆಡ್ಕ್ರಾಸ್ನ್ ಅಧಿಕಾರಿಗಳಾದ ಡಾ. ಮೊಹಮ್ಮದ್ ಫೈಸಲ್ ಮತ್ತು ಸದಸ್ಯರಾದ ಡಾ. ತೇಜಸ್ವಿ ನಾಯ್ಕ್, ಡಾ. ಸುಶ್ಮಿತಾ ವಿ.ಎಸ್, ಎನ್.ಎಸ್.ಎಸ್. ಅಧಿಕಾರಿ ಡಾ. ವಿದ್ಯಾಲಕ್ಷ್ಮೀ ಕೆ. ಸದಸ್ಯ ರಾದ ಡಾ. ಶ್ರೀನಿಧಿ ಧನ್ಯ, ಡಾ. ಸಂದೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು