ಕಾರ್ಕಳದ ಬಾಲೆ ಸನ್ವಿತಳ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಮಾಡುವಿರಾ!   

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಇರ್ವತೂರಿನ ಸಂತೋಷ್ ದೇವಾಡಿಗ ಇವರ ಮಗಳು   ಕುಮಾರಿ ಸನ್ವಿತ ದೇ​ವಾಡಿಗ  5 ವರ್ಷದ ಬಾಲಕಿಯಾಗಿದ್ದು ಕಳೆದ 10 ದಿನಗಳಿಂದ ಜ್ವರ ಬಂದ ಕಾರಣ ಸ್ಥಳೀಯ ವೈದ್ಯರನ್ನು  ಸಂಪರ್ಕಿಸಿರುತ್ತಾರೆ.
ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆಯನ್ನು, ಕೆಎಂಸಿ ಮಣಿಪಾಲ್‌ನ ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕೊಲಾಜಿ ವಿಭಾಗಕ್ಕೆ​ ​ಹೋಗುವಂತೆ ಸೂಚಿಸಿದ್ದು, ಆಕೆಯ ತಪಾಸಣೆ ನಡೆಸಿದಾಗ ಆಕೆಗೆ ಬಿ-ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಹೆಸರಿನ ಒಂದು ವಿಧದ ರಕ್ತದ ಕ್ಯಾನ್ಸರ್ ಇರುವುದು ತಿಳಿದು ಬಂದಿದ್ದು ಮತ್ತು ಅವಳು ಬೇಗನೆ ಕೀಮೋಥೆರಪಿಗೆ ಒಳಗಾಗಬೇಕಾಗಿದ್ದು ಚಿಕಿತ್ಸೆ ನೀಡಲಾ ಗುತ್ತಿದೆ .

ವೈದ್ಯರ ಪ್ರಕಾರ ಸನ್ವಿತಳಿಗೆ ​ಎರಡೂವರೆ ವರ್ಷಗಳವರೆಗೆ ಚಿಕಿತ್ಸೆಯ ಅಗತ್ಯವಿರುತ್ತದೆ​. ಆಕೆಯ ಚಿಕಿತ್ಸೆಯ ವೆಚ್ಚ ಸುಮಾರು 
ರೂ.​ 6 ಲಕ್ಷ ​ಆಗಲಿದೆ. ಆಕೆಯ ತಂದೆ ಕಾರ್ಕಳದಲ್ಲಿ ಜೆಸಿಬಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ​.  ತಾಯಿ ಗ್ರಹಿಣಿಯಾಗಿದ್ದು 5 ಮತ್ತು 3 ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ​ಇದ್ದಾರೆ. ಮಗುವಿನ ಖಾಯಿಲೆ​ ​ಇಡೀ ಕುಟುಂಬಕ್ಕೆಆಘಾತ ತಂದಿದೆ. 

ಸರ್ಕಾರಿ ಯೋಜನೆಗೆ ಕುಟುಂಬವು ಅರ್ಹತೆ ಹೊಂದಿರದ ಕಾರಣ, ಸನ್ವಿತಳಿಗೆ ಚಿಕಿತ್ಸೆಯ ಆರ್ಥಿಕ ಸಹಾಯಕ್ಕಾಗಿ ಕೆಎಂಸಿ ಮಣಿಪಾಲ್‌ ಆಸ್ಪತ್ರೆಯಿಂದ ರೂ.2 ,55,000 ​​ವನ್ನು(ಸೇವ್ ಲೈಫ್ ಚಾರಿ ಟೇಬಲ್ ಟ್ರಸ್ಟ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಫಂಡ್, ಮತ್ತು ಸರಕಾರೇತರ ಸಂಸ್ಥೆ) ಒದಗಿಸಿದ್ದು, ಇನ್ನು ಆಕೆಗೆ ಹೆಚ್ಚುವರಿ ರೂ.3,45,000 ಗಳ ಅಗತ್ಯವಿದ್ದು, ಚಿಕಿತ್ಸೆಯನ್ನು ಮುಂದುವರಿಸಲು ಆರ್ಥಿಕ ಸಹಾಯಕ್ಕಾಗಿ ಈ ಕುಟುಂಬ ​ದಾನಿಗಳ ಮೊರೆ ​ಹೋಗಿದ್ದಾರೆ.
ದಯವಿಟ್ಟು ಮಗುವಿನ ಚಿಕಿತ್ಸೆಗೆ ದಾನಿಗಳು ಸಹಾಯ ಮಾಡಿ ಮಗುವಿನ ಹೊಸ ಜೀವನಕ್ಕೆ ​ಸಹಕರಿಸುವಂತೆ ​ಸಾರ್ವಜನಿಕರ ಬೆಂಬಲಕ್ಕಾಗಿ ಎದುರು ನೋಡುತ್ತಿದೆ.​ ​ದಯವಿಟ್ಟು ಸಹಕರಿಸಿ.​ ​ಆಸಕ್ತ ದಾನಿಗಳು ಮಗುವಿನ ತಾಯಿ​ ಅಮಿತ  ಹೆಸರಿನಲ್ಲಿರುವ ​ಕಾರ್ಪರೇಷನ್ ​ಬ್ಯಾಂಕ್ ಖಾತೆಗೆ  ​ಜಮಾ ಮಾಡುವಂತೆ ಸಂತೋಷ್ ದೇವಾಡಿಗ ವಿನಂತಿಸಿದ್ದಾರೆ ​

ಖಾತೆ ಸಂಖ್ಯೆ:​ 520191063617973
IFSC CODE: CORP0000148​ ​
​ಕಾರ್ಕಳ ಶಾಖೆ. ಮೊಬೈಲ್ ಸಂಖ್ಯೆ: 87220 28379, 81974 76622        
 
 
 
 
 
 
 
 
 
 
 

Leave a Reply