ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳಿಗೆ ಸನ್ಮಾನ

ಉಡುಪಿ: ಜಿಲ್ಲೆಯ ನೂತನ ಆಯುಷ್ ವೈದ್ಯಾಧಿಕಾರಿ ಡಾ. ಪ್ರಕಾಶ್ ನಾಯ್ಕರನ್ನು ವಿಶ್ವ ಪರಿಸರ ದಿನಾಚರಣೆಯ ದಿನದಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಂಭಾಗಣದಲ್ಲಿ ಸನ್ಮಾನಿಸಲಾಯಿತು.

ಡಾ. ಪ್ರಕಾಶ್ ನಾಯ್ಕ ಅವರು ಈ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ತಮ್ಮ ಬಿ.ಎ.ಎಮ್.ಎಸ್. ವಿದ್ಯಾಭ್ಯಾಸವನ್ನು 1988-1994 ರಲ್ಲಿ ಪೂರೈಸಿದ್ದರು. ಡಾ. ನಾಗರಾಜ್ ಎಸ್, ವೈದ್ಯಕೀಯ ಅಧೀಕ್ಷಕರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ,ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಅತಿಥಿಗಳ ಪರಿಚಯ ಮಾಡಿದರು. ಸನ್ಮಾನಿತರಾದ ಡಾ. ಪ್ರಕಾಶ ನಾಯ್ಕ್ ತಮ್ಮ ಭಾಷಣದಲ್ಲಿ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಗುಣಮಟ್ಟದ ಕಲಿಕಾ ವ್ಯವಸ್ಥೆಯನ್ನು ಕೊಂಡಾಡಿ, ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡರು. ಡಾ. ಮಮತಾ ಕೆ.ವಿ. ಪ್ರಾಂಶುಪಾಲರು, ಎಸ್.ಡಿ.ಎಮ್. ಆಯುರ್ವೇದ ಕಾಲೇಜು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನೂತನ ಆಯುಷ್ ವೈದ್ಯಾಧಿಕಾರಿಗಳಿಗೆ ಶುಭ ಕೋರಿ,ಆಯುರ್ವೇದ ಸಂಶೋಧನೆಗಳಲ್ಲಿ ಜಿಲ್ಲಾ ಆಯುಷ್ ವಿಭಾಗದ ಜೊತೆ ಕಾಲೇಜಿನ ಪೂರ್ಣ ಸಹಕಾರದ ಭರವಸೆ ನೀಡಿದರು.

 
 
 
 
 
 
 
 
 
 
 

Leave a Reply