ಸಾಣೂರು ಪಂಚಾಯಿತಿಯಲ್ಲಿ ಇ -ಶ್ರಮ ಉಚಿತ ನೊಂದಾವಣಿ ಕಾರ್ಯಕ್ರಮ

ಸಾಣೂರು : ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಪಕ್ಷ ಹಾಗೂ ಕಾರ್ಯಕರ್ತರದ್ದು ಎಂದು ರಾಜ್ಯ ಬಿಜೆಪಿ ಪಂಚಾಯತ್ ರಾಜ್ ಆಡಳಿತ ಮಂಡಳಿ ಸದಸ್ಯರು ಆದ ಕೆ. ಎಂ. ಎಫ್ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ಅಭಿಪ್ರಾಯಪಟ್ಟರು.

ಯೂಥ್ ಫಾರ್ ಸೇವಾ ಉಡುಪಿ ಮತ್ತು ಸಾಣೂರು ಸುವರ್ಣ ಗ್ರಾಮ ಸೌಧದಲ್ಲಿ ನಡೆದ ಬಿಜೆಪಿ ಗ್ರಾಮ ಸಮಿತಿಯ ನೇತೃತ್ವದಲ್ಲಿ ದಿಶಾನಿ ಡಿಜಿಟಲ್ ಎಂಟರ್ಪ್ರೈಸಸ್ ಸಹಯೋಗದಲ್ಲಿ ನಡೆದ ಕೇಂದ್ರ ಸರ್ಕಾರದ ಇ – ಶ್ರಮ ಕಾರ್ಮಿಕ ಕಾರ್ಡ್ ನೋಂದಾವಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಯುವರಾಜ್ ಜೈನ್ ಕಾರ್ಯಕ್ರಮ ಉದ್ಘಾಟಸಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಕೋಟ್ಯಾನ್, ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಶೆಟ್ಟಿ, ಉಪಾಧ್ಯಕ್ಷ ಶ್ರೀ ಪ್ರಸಾದ್ ಪೂಜಾರಿ, ಬಿಜೆಪಿ ನಿಟ್ಟೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕರುಣಾಕರ್ ಎಸ್ ಕೋಟ್ಯಾನ್ ಪಂಚಾಯತ್ ಸದಸ್ಯರುಗಳಾದ ಸುಮತಿ ಪೂಜಾರಿ, ಪ್ರಮೀಳಾ ಪೂಜಾರಿ, ಸುನಂದ ನಾಯ್ಕ್, ಸರಸ್ವತಿ ಆಚಾರ್ಯ, ನಿಟ್ಟೆ ಶಕ್ತಿ ಕೇಂದ್ರ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಅಮೀನ್ ದಿಶಾನಿ, ಸಂಸ್ಥೆಯ ಗಣೇಶ್ ಯೂಥ್ ಫಾರ್ ಸೇವಾ ಸಂಸ್ಥೆಯ ಉಡುಪಿ ಜಿಲ್ಲಾ ಸಂಚಾಲಕಿ ರಮಿತ ಶೈಲೆಂದ್ರ ಉಪಸ್ಥಿತರಿದ್ದರು.

ಯೂಥ್ ಫಾರ್ ಸೇವಾ ಸಂಸ್ಥೆಯ ಉಡುಪಿ ಜಿಲ್ಲಾ ಸಂಚಾಲಕಿ ರಮಿತ ಶೈಲೆಂದ್ರ ಪ್ರಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 
 
 
 
 
 
 
 
 

Leave a Reply