ಉಡುಪಿ: ಪತಂಜಲಿ ಯೋಗ ಸಮಿತಿ ಉಡುಪಿ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ಮಧ್ವಾಂಗಣ ದಲ್ಲಿ ರಥ ಸಪ್ತಮಿ ಅಂಗವಾಗಿ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಬೆಳಿಗ್ಗೆ 5:45 ರಿಂದ 7:00 ವರೆಗೆ ನೆಡೆಯಿತು.
ಮಹಿಳಾ ಪ್ರಭಾರಿ ಲೀಲಾ ಅಮೀನ್ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು. ಯುವ ಪ್ರಭಾರಿ ಜಗದೀಶ್ , ಯೋಗ ಶಿಕ್ಷರಾದ ಸುರೇಶ್ ಇಂದ್ರಾಳಿ, ಶೋಭಾ ಶೆಟ್ಟಿ, ಚೆನ್ನಮ್ಮ, ಪ್ರೀತಿ ಶೆಟ್ಟಿ, ಹರಿಣಾಕ್ಷಿ, ಮನೋಜ್, ಶ್ರೀಕಾಂತ್ ಪಾಲ್ಗೊಂಡಿದ್ದರು. ಯೋಗ ಗುರುಗಳಾದ ಬೇರೊಳ್ಳಿ ನಾಗರಾಜ್ ಶೇಟ್ ಸೂರ್ಯ ನಮಸ್ಕಾರ ನೆಡೆಸಿಕೊಟ್ಟರು.ದಾನಿತಾ ಪದ್ಮಶಾಲಿ ನಿರೂಪಿಸಿದರು.