ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ “ಕೆಹೆಚ್ ಲರ್ನ್” ನಿರಂತರ ಕಲಿಕಾ ಕಾರ್ಯಕ್ರಮ.

9ನೇ ಜನವರಿ 2021, ಶನಿವಾರದಂದು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ “ಕೆಹೆಚ್ ಲರ್ನ್”, ನಿರಂತರ ಕಲಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. “ಕೆಹೆಚ್ ಲರ್ನ್” ಅನ್ನು ಮಾಹೆ ಮಣಿಪಾಲದ ಉಪಕುಲಪತಿ ಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಉದ್ಘಾಟಿಸಿದರು. ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಗಳಾದ -ಡಾ. ಪಿಎಲ್ಎನ್ ಜಿ ರಾವ್ ರವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದರು.

ಕೆಎಂಸಿಯ ಡೀನ್ ಡಾ.ಶರತ್ ಕೆ ರಾವ್, ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ, ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸಿ ಜಿ ಮುತ್ತನ, ಡಾ ಅನಿಲ್ ಕೆ ಭಟ್, ಡಾ ಕೃಷ್ಣಾನಂದ ಪ್ರಭು, ಡಾ ಪದ್ಮರಾಜ ಹೆಗಡೆ ಉಪಸ್ಥಿತರಿದ್ದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು, “ವೃತ್ತಿ ಪರ ವೈದ್ಯರಿಗೆ ಮತ್ತು ಬೋಧನೆ ಮಾಡುವ ಎಲ್ಲ ವೈದ್ಯರಿಗೆ ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸುವುದು ಮತ್ತು ವೈದ್ಯಕೀಯ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ಪ್ರತಿ ವಿಭಾಗಗಳು , ಉಪ-ವಿಭಾಗಗಳು , ವಿಶೇಷ ವಿಭಾಗಳು ಮತ್ತು ಆಡಳಿತಾತ್ಮಕ ಅಂಶಗಳಿಗೂ ಇದು ಅನುಕೂಲಕರವಾಗಿದೆ.

ವಾಸ್ತವವಾಗಿ, ವೈದ್ಯಕೀಯ ಶಿಕ್ಷಣದ ಕ್ಷೇತ್ರದಲ್ಲಿ ನಾಲ್ಕು ಪ್ರಮುಖ ಅಂಶಗಳನ್ನು ಒತ್ತಿಹೇಳಲಾಗಿದೆ, ಶಿಕ್ಷಕರಿಂದ ಕಲಿಯುವುದು, ಸ್ವ-ಕಲಿಕೆ, ಜೊತೆಗಾರರಿಂದ ಕಲಿಕೆ ಮತ್ತು ಜೀವನಪರ್ಯಂತ ಕಲಿಕೆ. ಇತರ ವಿಶೇಷತೆಗಳು, ಉಪವಿಭಾಗಗಳು ಮತ್ತು ಸಂಬಂಧಿತ ವಿಶೇಷತೆಗಳಲ್ಲಿ ಹೊಸತೇನಿದೆ ಎಂದು ತಿಳಿಯಲು ಈ ರೀತಿಯ ವೇದಿಕೆ ತುಂಬಾ ಉಪಯುಕ್ತವಾಗಿದೆ ” ಎಂದು ಹೇಳಿದರು.

ಡಾ. ಪಿಎಲ್ಎನ್ ಜಿ ರಾವ್  ಅವರು “ಜ್ಞಾನವು ಪ್ರತೀ 3 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ದ್ವಿಗುಣ ಗೊಳ್ಳುತ್ತದೆ, ಯಾರಿಗೂ ಜ್ಞಾನದ ವೇಗವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಲಿಕಾ ಕಾರ್ಯಕ್ರಮವು ಹೊಸ ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಕಲಿಯಲು ಸರಿಯಾದ ವೇದಿಕೆಯಾಗಿದೆ ” ಎಂದು ಹೇಳಿದರು.

ಡಾ.ಶರತ್ ಕೆ ರಾವ್ ಅವರು “ಕೆಎಚ್ ಲರ್ನ್” ,ನಿರಂತರ ಕಲಿಕಾ ಕಾರ್ಯಕ್ರಮದ ಕುರಿತು ಅವಲೋಕನವನ್ನು ನೀಡಿದರು, ಡಾ.ಅವಿನಾಶ್ ಶೆಟ್ಟಿ ಅವರು ಸ್ವಾಗತಿಸಿದರು ಮತ್ತು ಡಾ.ಪದ್ಮರಾಜ್ ಹೆಗ್ಡೆ ಅವರು ವಂದನಾರ್ಪಣೆ ಗೈದರು. ಶಸ್ತ್ರಚಿಕಿತ್ಸಾ ಕ್ಯಾನ್ಸರ್ ವಿಭಾಗದ ಮುಖ್ಯಸ್ಥರಾದ ಡಾ.ನವೀನ್ ಕುಮಾರ್ ಎ ಎನ್ ತಮ್ಮ ವಿಭಾಗದಲ್ಲಿ ನಡೆಸುತ್ತಿರುವ ಅಪರೂಪದ ಶಸ್ತ್ರಚಿಕಿತ್ಸೆಗಳ ಕುರಿತು ಮಾತನಾಡಿದರು. ಡಾ ನಿಕಿತಾ ಕಾರ್ಯಕ್ರಮ ನಿರೂಪಿಸಿದರು.

​​

 
 
 
 
 
 
 
 
 
 
 

Leave a Reply