ಜಿ ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ನೋಂದಣಿ ಅವಧಿ ನಂಬರ್ 25ರವರೆಗೆ ವಿಸ್ತರಣೆ

ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಇದರ ಪ್ರವರ್ತಕರಾದ ನಾಡೋಜ ಡಾ.ಜಿ ಶಂಕರ್ ಅವರು ಮಣಿಪಾಲ ಸಿಗ್ನ ಹೆಲ್ತ್ ಇನ್ಸೂರೆನ್ಸ್ ಕಂಪನಿ ಸಹಯೋಗದಲ್ಲಿ ಮಣಿಪಾಲ ಇವರ ಸಹಕಾರದೊಂದಿಗೆ ಪ್ರಾರಂಭಿಸಿದ ಆರೋಗ್ಯ ಸುರಕ್ಷಾ ಯೋಜನೆ ನೋಂದಣಿ ಕಾರ್ಯ ಭರದಿಂದ ಸಾಗುತ್ತಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ತಾರೀಕು 14 ಹಾಗು  15,  ರಜೆ ಇರುವುದರಿಂದ ಸಾರ್ವಜನಿಕರ ಬೇಡಿಕೆಯ ಮೇರೆಗೆ ನವಂಬರ್ 25 ರವರೆಗೆ ವಿಸ್ತರಿಸಲಾಗಿದೆ. ಕಡಿಮೆ ವರಮಾನ ಇರುವ ಕುಟುಂಬಗಳಿಗೆ ವರದಾನವಾಗಿರುವ 50 ಸಾವಿರ ಮೌಲ್ಯದ ಅತ್ಯಾಕರ್ಷಕ ವಿಮಾ ಯೋಜನೆ ಇದಾಗಿರುತ್ತದೆ.  ಯಾವುದೇ ಷರತ್ತುಗಳಿಲ್ಲದೆ ಪಡೆಯಲು ಅವಕಾಶವಿರುತ್ತದೆ

ಮಣಿಪಾಲ ಕೆಎಂಸಿ ಸಮೂಹ ಆಸ್ಪತ್ರೆಗಳಿಗೆ ಸೀಮಿತವಾಗಿರುವ ವಿಮಾ ಯೋಜನೆಯಡಿಯಲ್ಲಿ ಸಾವಿರಾರು ಕುಟುಂಬಗಳು ಈಗಾಗಲೇ ನೊಂದಾಯಿಸಿಕೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹಿಂದೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ಹೊಂದಿದ್ದವರು ಹಳೆ ಕಾರ್ಡ್,  ಆಧಾರ್ ಕಾರ್ಡ್ ಮತ್ತು ಕುಟುಂಬದ ರೇಷನ್ ಕಾರ್ಡ್ ಹಾಗೂ ಹೊಸ ಕಾರ್ಡ್ ಪಡೆಯಲಿಚ್ಚಿ ಸುವವರು  ಆಧಾರ್ ಕಾರ್ಡ್ ಮತ್ತು ಕುಟುಂಬದ ರೇಷನ್ ಕಾರ್ಡ್ ಪ್ರತಿಯೊಂದಿಗೆ 20.11.2020 ರ ಒಳಗಾಗಿ ಮೊಗವೀರ ಯುವ ಸಂಘಟನೆಯ ಘಟಕಗಳು ಅಥವಾ ಮೊಗವೀರ ಯುವ ಸಂಘಟನೆಯ ಜಿಲ್ಲಾ ಕಚೇರಿ, ಮಾಧವ ಮಂಗಲ ಸಮುದಾಯ ಭವನ,  ಫ್ಯಾಮಿಲಿ ಹಾಲ್ ಎದುರು ಅಂಬಲಪಾಡಿ, ಉಡುಪಿ ಇಲ್ಲಿ ಸಂಪರ್ಕಿಸ ಬಹುದಾಗಿದೆ

 
 
 
 
 
 
 
 
 
 
 

Leave a Reply