ಭಾಜಪ ಉಡುಪಿ ನಗರದ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಮಣಿಪಾಲ: ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಇದರ ಆಶ್ರಯದಲ್ಲಿ ಹಾಗೂ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಉಡುಪಿ ನಗರ ಹಾಗೂ ಕೆಎಂಸಿ ರಕ್ತನಿಧಿ ವಿಭಾಗ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಇಂದು ಮಣಿಪಾಲ ದಲ್ಲಿ ಯಶಸ್ವಿಯಾಗಿ ನಡೆಯಿತು, ಈ ಶಿಬಿರದಲ್ಲಿ 62 ಯುನಿಟ್ ರಕ್ತ ಸಂಗ್ರಹವಾಯಿತು.

ರಕ್ತದಾನದ ಮಹತ್ವವನ್ನು ಸತೀಶ್ ಸಾಲಿಯಾನ್ ತಿಳಿಸಿದರು. ಹಾಗೂ ರಕ್ತನಿಧಿ ವಿಭಾಗದ ಪ್ರತಿನಿಧಿ ವಿಶ್ವೇಶ್ ಅವರು ಯುವಕರನ್ನು ಲಸಿಕೆ ತಗೊಳ್ಳುವ ಮುಂಚೆ ರಕ್ತದಾನ ಮಾಡಬೇಕಾಗಿ ಕೋರಿಕೊಂಡರು.

ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಇಂದು ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗೆ ಅಭಿನಂದನೆಗಳು ಸಲ್ಲಿಸಿದರು ಮೇ1 ನಂತರ ಲಸಿಕೆ ತಗೆದುಕೊಳ್ಳುವ ಮುಂಚೆ ಎಲ್ಲಾ ಯುವಕರು ರಕ್ತದಾನ ಮಾಡಬೇಕಾಗಿ ವಿನಂತಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರ ಅಧ್ಯಕ್ಷ ಮಹೇಶ್ ಠಾಕೋರ್,ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್,ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ವೀಣಾ ಶೆಟ್ಟಿ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಪ್ರಮುಖ ಗುರುಪ್ರಸಾದ್ ಶೆಟ್ಟಿ, ರಕ್ತದ ಆಪತ್ಬಾಂಧವ ಸತೀಶ್ ಸಾಲ್ಯಾನ್ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಸುಶಾಂತ್ ಕುಮಾರ್ ನಿಧೀಶ್ ಶ್ರೀಯನ್, ಕಾರ್ಯದರ್ಶಿಗಳಾದ ಶ್ರೀವತ್ಸ, ಸಂದೇಶ ಪ್ರಭು ಹಾಗೂ ತೆಂಕನಿಡಿಯೂರು ಯುವ ಮೋರ್ಚಾ ಅಧ್ಯಕ್ಷ ಸೂರಜ್ ಪೂಜಾರಿ, ಹೆರ್ಗ ಮಹಾ ಶಕ್ತಿಕೇಂದ್ರ ಅಧ್ಯಕ್ಷ ಪ್ರವೀಣ್ ನಾಯಕ್ ನಿಖಿಲ್ ಮಡಿವಾಳ, ಗುರು ಮಡಿವಾಳ ವಿಕ್ರಂ ಶಾನಭಾಗ್ ಕಾರ್ತಿಕ್ ಪಾಲನ್ ನರಸಿಂಹ ಮತ್ತಿತರರ ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply