ಎಸ್ ಡಿಎಂ ಆಯುರ್ವೇದ ಮಹಾವಿದ್ಯಾಲಯದ​ಲ್ಲಿ ​ರಕ್ತದಾನ ಶಿಬಿರದಲ್ಲಿ​ 90 ಯೂನಿಟ್‌ಗಳಿಗೂ​ ಅಧಿಕ ರಕ್ತವನ್ನು ಸಂಗ್ರಹ

ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ​ ಆಯುರ್ವೇದ ಮಹಾವಿದ್ಯಾಲಯದ ರೆಡ್‌ಕ್ರಾಸ್ ಘಟಕ,​ ​ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ​ಶನಿವಾರದಂದು ಜರುಗಿತು.
ಜಿಲ್ಲಾ ರಕ್ತನಿಧಿ ಘಟಕದ ಅಧಿಕಾರಿ​ ಡಾ. ವೀಣಾ ಕುಮಾರಿ ಮುಖ್ಯ ಅತಿಥಿಯಾಗಿ ಆಗಮಿಸಿ,​ ರಕ್ತದಾನದಲ್ಲಿ ಸಂಸ್ಥೆ ವಹಿಸುತ್ತಿರುವ​ ಕಾಳಜಿಯನ್ನು ​ಶ್ಲಾಘಿಸಿ, ಮುಂದೆಯೂ ಇದೇ​ ರೀತಿಯ ಸಹಕಾರವನ್ನು ಅಪೇಕ್ಷಿಸುತ್ತೇವೆ ಎಂದುನುಡಿದರು.
ಎಸ್.ಡಿ.ಎಮ್. ಸಂಶೋಧನಾ ಕೇಂದ್ರದ​ ​ಸಂಶೋಧನಾಧಿಕಾರಿಯಾದ ಶ್ರೀ ನವೀನ್‌ಚಂದ್ರ​ ಎನ್.ಎಚ್. ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನೆರವೇರಿತು. ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ​ವಿದ್ಯಾಲಕ್ಷ್ಮೀ ​ ಕೆ. ಸ್ವಾಗತಿಸಿ ದರು. ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಡಾ.​ ಮೊಹಮ್ಮದ್ ಪೈಸಲ್ ವಿದ್ಯಾರ್ಥಿಗಳಿಗಾಗಿ​ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರ​ ಪಟ್ಟಿಯನ್ನು ಓದಿದರು. ಮುಖ್ಯ ಅತಿಥಿಗಳು​ ಬಹುಮಾನ ವಿತರಿಸಿದರು. 
 
ತೃತೀಯ ವರ್ಷದ​ ಬಿ.ಎ.ಎಮ್.ಎಸ್. ವಿದ್ಯಾರ್ಥಿನಿಯರಾದ ನಿಖಿತಾ ಹಾಗೂ ಹರಿಪ್ರಿಯಾ​ ಕಾರ್ಯಕ್ರಮ ನಿರೂಪಿಸಿದರು. ಸಭಾ​ ಕಾರ್ಯಕ್ರಮದ ಬಳಿಕ ಎಸ್.ಡಿ.ಎಂ. ಆಯುರ್ವೇದ​ ಆಸ್ಪತ್ರೆಯಲ್ಲಿ ಜಿಲ್ಲಾ ರಕ್ತನಿಧಿ ಘಟಕದ​​ ಸಹಯೋಗದಲ್ಲಿ ಕೊವಿಡ್ ​19 ನಿಯಮಗಳಿಗನುಸಾರವಾಗಿ ರಕ್ತದಾನ ಶಿಬಿರ ಮುಂದುವರಿಯಿತು.
ವಿದ್ಯಾರ್ಥಿಗಳು, ಸಿಬ್ಬಂದಿ​ ವರ್ಗದವ​ರಿಂದ  ಸುಮಾರು ​90 ಯೂನಿಟ್‌ಗಳಿಗೂ​ ಅಧಿಕ ರಕ್ತವನ್ನು ಸಂಗ್ರಹಿಸಲಾಯಿತು.
 
 
 
 
 
 
 
 
 
 
 

Leave a Reply