ಮಗಳ ಮೊರೆಗೆ ಕಿವಿ ಕೊಡಲೇ ಇಲ್ಲ ಪರಮಾತ್ಮ

ಮೂಡುಬಿದಿರೆ: ರಾಜ್ಯ ಸರ್ಕಾರದ ವಿದ್ಯಾ ಗಮ ಯೋಜನೆಯಲ್ಲಿ ಪಾಲ್ಗೊಂಡ ಬಳಿಕ ಕೋವಿಡ್-19 ಸೋಂಕಿಗೊಳಗಾಗಿದ್ದ ಮೂಡುಬಿದಿರೆ ಸಮೀಪದ ಶಿರ್ತಾಡಿ ಮಕ್ಕಿಯ ಜವಾಹರ್ ನೆಹರೂ ಹೈಸ್ಕೂಲ್‌ನ ಶಿಕ್ಷಕಿ ಪದ್ಮಾಕ್ಷಿ ಶುಕ್ರವಾರ ಮುಂಜಾನೆ ಅಸು ನೀಗಿದ್ದಾರೆ.

ಕೆಲದಿನಗಳ ಹಿಂದೆ ಅವರ ಪತಿ, ಮೂಡ ಬಿದಿರೆಯ ಡಿ.ಜೆ. ಹೈಯರ್ ಪ್ರೈಮರಿ ಶಾಲೆ ಮುಖ್ಯಶಿಕ್ಷಕರಾಗಿರುವ ಶಶಿಕಾಂತ್ ಮತ್ತು ಪತ್ನಿ ಪದ್ಮಾಕ್ಷಿಯವರಿಗೆ ಕರೊನಾ ತಗುಲಿದ್ದು, ಶಶಿಕಾಂತ್ ಚೇತರಿಸಿಕೊಂಡಿದ್ದರು. ಆದರೆ ಪದ್ಮಾಕ್ಷಿಯವರ ಆರೋಗ್ಯ ಹದಗೆಟ್ಟಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದರು.

ಮಗಳು ಈ ವಿಷಯದಲ್ಲಿ ಮುಖ್ಯಮಂತ್ರಿಗೆ, ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವುದನ್ನು ಇಲ್ಲಿ ಸ್ಮರಿಸಬಹುದು.

 
 
 
 
 
 
 
 
 
 
 

Leave a Reply