“ಯುವಜನತೆ ಮತ್ತು ವಿಧ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಬೇಕು” – ವಿಶ್ವನಾಥ್ ಶೆಣೈ

ಉಡುಪಿ: ಯುವಜನರು ಮತ್ತು ವಿಧ್ಯಾರ್ಥಿಗಳು ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಬೇಕು ಎಂದು ಉಡುಪಿ ರಾಮಭವನ ಹೋಟೆಲ್ ನ ಮಾಲಕರಾದ ವಿಶ್ವನಾಥ್ ಶೆಣೈರವರು ಹೇಳಿದರು.
ಬೆಸ್ಟ್ ಅಕಾಡೆಮಿ ಉಡುಪಿ, ಗುಣಮಟ್ಟದ ಶಿಕ್ಷಣದ ಜೊತೆಗೆ ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದ್ದು ಸಂಸ್ಥೆ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಬೆಸ್ಟ್ ಅಕಾಡೆಮಿ ಉಡುಪಿ ಉದ್ಘಾಟಿಸಿ ಶುಭ ಹಾರೈಸಿದರು.
 
ಉಡುಪಿಯ ಅಲಂಕಾರ್ ಟಾಕೀಸ್ ಬಳಿ ಲಂಡನ್ ಆಪ್ಟಿಕಲ್ಸ್ ಮಹಡಿಯಲ್ಲಿರುವ ಸಂಸ್ಥೆಯು ಈಗಾಗಲೇ ಕಂಪ್ಯೂಟರ್ ತರಬೇತಿಯನ್ನು ನೀಡುತ್ತಿದ್ದು ಅದರ ಜೊತೆಗೆ ಇಂಗ್ಲಿಷ್ ಸ್ಪೀಕಿಂಗ್ ಹಾಗೂ ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ, ಬ್ಯಾಂಕಿಂಗ್ ಐ.ಬಿ.ಪಿ.ಎಸ್ ತರಬೇತಿಯನ್ನು ನೀಡುತ್ತಿದೆ ಎಂದು ರಫೀಕ್ ಖಾನ್ ರವರು ತಿಳಿಸಿದರು.
ಕಂಪ್ಯೂಟರ್ ತರಬೇತಿ ಪಡೆದ ವಿಧ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿಶ್ವನಾಥ್ ಶೆಣೈರವರು ವಿತರಿಸಿದರು. ಸಂತೋಷ್ ರವರು ವಂದಿಸಿದರು. ಸಂಸ್ಥೆಯ ತರಬೇತುದಾರರಾದ ಶ್ರೀಲತಾ ರವರು, ವಿಧ್ಯಾರ್ಥಿಗಳು ಮತ್ತು ಅವರ ಪಾಲಕರು, ಹಿತೈಷಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply