ಉಡುಪಿ : ಬಿ.ಕಾಂ ಮತ್ತು ಬಿಬಿಎ ಪದವಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಹಣಕಾಸು ಮಾರುಕಟ್ಟೆ ಉತ್ತಮ ರಹದಾರಿಯಾಗಿದೆ, ಬ್ಯಾಂಕ್, ಇನ್ಶುರೆನ್ಸ್, ಹ್ಯೂಮನ್ ರಿಸೋರ್ಸ್, ಮಾರ್ಕೆಟಿಂಗ್, ಡಿಜಿಟಲ್ ಮಾರ್ಕೆಟಿಂಗ್, ಸೇಲ್ಸ್, ಆಪರೇಟೀವ್ ಡೊಮೈನ್, ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್, ಮ್ಯೂಚುವಲ್ ಫಂಡ್ದ್, ಜಿ.ಎಸ್.ಟಿ ಆಪರೇಟಿಂಗ್, ಅಕೌಂಟಿಂಗ್ ಆಪರೇಟಿಂಗ್ ಹೀಗೆ ಇನ್ನಿತರ ಕ್ಷೇತ್ರಗಳಲ್ಲಿ ಸಮೀಕ್ಷೆಯ ಪ್ರಕಾರ ಸುಮಾರು 2 ಲಕ್ಷ ಉದ್ಯೋಗಾವಕಾಶಗಳು ಇವೆ, ಕೋವಿಡ್ 19 ನ ಪ್ರಭಾವವಿದ್ದರೂ ಇಂತಹಾ ಎಂಟ್ರಿ ಲೆವೆಲ್ ಜಾಬ್ ಗಳಿಗೆ ತೊಂದರೆ ಆಗದು ಎಂದು ಹೈದರಾಬಾದ್ ನ ಶೈನ್ ಪ್ರಾಜೆಕ್ಟ್ ಆನ್ಲೈನ್ ಎಜ್ಯುಕೇಶನ್ ಟ್ರೈನಿಂಗ್ ಕಂಪೆನಿಯ ಎಂ.ಡಿ. ವೆಂಕಟ ಹರ್ಷಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಉಡುಪಿಯ ಶ್ರೀ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕ ಹಮ್ಮಿಕೊಂಡಿದ್ದ ಆನ್ಲೈನ್ ವೆಬಿನಾರ್ ನಲ್ಲಿ ಷೇರು ಮಾರುಕಟ್ಟೆ ಮತ್ತು ಹಣಕಾಸು ಮಾರುಕಟ್ಟೆ ಪದವಿ ವಿದ್ಯಾರ್ಥಿಗಳಿಗೆ ಎಷ್ಟು ಪೂರಕವಾಗಿದೆ ಎಂದು ತಿಳಿಸಿಕೊಟ್ಟರು.
ಕಾಲೇಜಿನ ಪ್ರಾಚಾರ್ಯೆ ಡಾ.ಸುಕನ್ಯಾ ಮೇರಿ, ವೃತ್ತಿ ಮಾರ್ಗದರ್ಶನ ಘಟಕದ ಸಂಚಾಲಕ ರಾಘವೇಂದ್ರ ಜಿ.ಜಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಸದುಪಯೋಗ ಪಡೆದರು. ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ವಿದ್ಯಾರ್ಥಿನಿ ಸಮೀಕ್ಷಾ ಪ್ರಭು ಕಾರ್ಯಕ್ರಮ ಸಂಯೋಜಿಸಿ, ನಿರೂಪಿಸಿದರು.