ಕುಂಜಿಬೆಟ್ಟು, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸುತ್ತೋಲೆಯಂತೆ ಕೋವಿಡ್-19ರ ದ್ವಿತೀಯ ಅಲೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಸಲುವಾಗಿ ಉಪನ್ಯಾಸಕ, ಉಪನ್ಯಾಸಕೇತರ ಹಾಗೂ ವಿದ್ಯಾರ್ಥಿ ಸಮೂಹ ಜಾಥವನ್ನು ಆಯೋಜಿಸಿತ್ತು.
ಜಾಥದ ಮುಂದಾಳತ್ವವನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ್ ಭಟ್ ಕೋವಿಡ್ ಲಸಿಕೆ ಹಂತಹಂತವಾಗಿ ನೀಡಲಾಗುತ್ತಿದ್ದು ಎಲ್ಲರ ಪಾಲಿಗೂ ಲಭಿಸಲಿದೆ, ಆದಷ್ಟು ನಾವು ಮುನ್ನೆಚ್ಚರಿಕೆ ವಹಿಸಿ ಕಾರ್ಯಪ್ರವೃತ್ತರಾಗುವುದು ಒಳ್ಳೆಯದು ಎಂದು ತಿಳಿಸಿದರು. ಈ ಜಾಥವನ್ನು ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ಸಂಯೋಜಿಸಿ, ನಿರೂಪಿಸಿದರು.