ಕುಂಜಿಬೆಟ್ಟು ಉಪೇಂದ್ರ ಪೈ ಮೆಮೊರಿಯಲ್ ಕಾಲೇಜಿನ ವಾರ್ಷಿಕಾಂಕ ಸುಪ್ರಭಾ 2019-20 ಇದರ ಅನಾವರಣ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊಫೆಸರ್ ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯರವರು ನಡೆಸಿಕೊಟ್ಟರು.
ವಿವಿಯ ಕುಲಸಚಿವರ ಕಛೇರಿಯ ವಿಶೇಷ ಅಧಿಕಾರಿ ಪ್ರೊ.ಚಂದ್ರು ಹೆಗ್ಡೆ, ಯು.ಪಿ.ಎಂ.ಸಿಯ ಪ್ರಾಚಾರ್ಯ ಡಾ.ಮಧುಸೂದನ್ ಭಟ್, ಸಂಚಿಕೆ ಸಂಪಾದಕ ರಾಘವೇಂದ್ರ ಜಿ.ಜಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.