ಪ್ರೌಢಶಾಲಾ ವೃತ್ತಿ ಶಿಕ್ಷಣ ಶಿಕ್ಷಕರ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟನೆ

ಉಡುಪಿ: ಬಾಲಕಿಯರ ಪ ಪೂ ಕಾಲೇಜಿನಲ್ಲಿ ನಡೆದ ಪ್ರೌಢಶಾಲಾ ವೃತ್ತಿ ಶಿಕ್ಷಣ ಶಿಕ್ಷಕರ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಸಂಸ್ಥೆಯ ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ ಉದ್ಘಾಟಿಸಿದರು.

ಬಳಿಕ ಮಾತನಾಡಿ ಪುನಶ್ಚೇತನ ಕಾರ್ಯಗಾರಗಳು ಶಿಕ್ಷಕರಿಗೆ ತರಗತಿಯಲ್ಲಿ ಪರಿಣಾಮಕಾರಿ ಬೋಧಿಸಲು ಸಹಕಾರಿಯಾಗಿದೆ ಎಂದರು.ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ ವೃತ್ತಿಶಿಕ್ಷಕರಾದ ಶಾಮ್ ಶ್ಯಾನುಭಾಗ್ ಹಾಗೂ ವಿನಯಾ ಶೆಣೈರವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.

 ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಣಾಧಿಕಾರಿ ನಾಗರಾಜ್ ಮೈರುಕೋಮೆ,ಜಿಲ್ಲಾ ಸಂಘದ ಅಧ್ಯಕ್ಷ ವಿಶ್ವನಾಥ ಎಂ ಕೂರಾಡಿ ಕಾರ್ಯದರ್ಶಿ ರುದ್ರ ಆಚಾರ್,ಶಿಕ್ಷಕಿಯರಾದ ಪ್ರತಿಭಾ,ಮಂಜುಳಾ,ಆರತಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply