ಎಸ್.ಡಿ.ಎಮ್.ನ ನೂತನ ಮಾನಸರೋಗ ಹೊರರೋಗಿ ವಿಭಾಗದ ಉದ್ಘಾಟನೆ

ಉಡುಪಿಯ ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆಯ ಮಾನಸ ರೋಗ ಸ್ಪೆಷಾಲಿಟಿಯ ಹೊಸ ಒಪಿಡಿಯ ಉದ್ಘಾಟನೆ ಗುರುವಾರದಂದು ನಡೆಯಿತು. ಒಪಿಡಿಯ ನೇತೃತ್ವವನ್ನು ಮಾನಸರೋಗ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ವಿಜಯೇಂದ್ರ ಭಟ್ ವಹಿಸಿದ್ದಾರೆ.
ಅವರೊಂದಿಗೆ ಡಾ. ಧನೇಶ್ವರಿ ಎಚ್.ಎ. ಸಹಾಯಕ ಪ್ರಾಧ್ಯಾಪಕರು, ಡಾ. ಶ್ರೀವಿದ್ಯಾ, ಸಹಾಯಕ ಪ್ರಾಧ್ಯಾಪಕರು ಸೇವೆಗೆ ಲಭ್ಯರಿರುತ್ತಾರೆ. ನಿರಂತರ ಒತ್ತಡದಿಂದ ಉಂಟಾಗುವ ಹಾಗೂ ಇತರ  ಮನೋರೋಗಗಳಿಗೆ ಹೊರ ಮತ್ತು ಒಳ ರೋಗಿ ವಿಭಾಗದಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಒಳಗೊಂಡ ಆoತರಿಕ ಔಷಧಿಗಳೊಂದಿಗೆ ಸೂಕ್ತ ಸಲಹೆ ನೀಡುವಲ್ಲಿ ಒಪಿಡಿ ಸಮಾಜದ ಮನೋವೈದ್ಯಕೀಯ ಅಗತ್ಯವನ್ನು ಪೂರೈಸುತ್ತದೆ. 
ಉದ್ಘಾಟನೆಯನ್ನು ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ನೆರವೇರಿಸಿದರು. ಕಾಯ ಚಿಕಿತ್ಸ ವಿಭಾಗದ ಎಚ್‌ಒಡಿ ಡಾ. ಶ್ರೀಲತಾ ಕಾಮತ್ ಮತ್ತು ಆಸ್ಪತ್ರೆಯ ವ್ಯವಸ್ಥಾಪ ಕರಾದ ಶ್ರೀ ಸಿ.ಎಸ್. ಹೆಗ್ಡೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಾರ್ವಜನಿಕರು ಸೌಲಭ್ಯವನ್ನು ಉಪಯೋಗಿಸಲು ಮುಖ್ಯ ವೈದ್ಯಾಧಿಕಾರಿ ಡಾ. ಮಮತಾ ಕೆ.ವಿ. ತಿಳಿಸಿರುತ್ತಾರೆ.
 
 
 
 
 
 
 
 
 
 
 

Leave a Reply