ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ

​ಮಂಗಳೂರು ವಿಶ್ವವಿದ್ಯಾನಿಲಯದ ದ್ವಿತೀಯ ವರ್ಷದ ಬಿ.ಕಾಂ ಕಾಸ್ಟ್ ಆ್ಯಂಡ್ ಮ್ಯಾನೇಜ್‌ಮೆಂಟ್​ ​ಅಕೌಂಟಿಂಗ್ಗೆ ಪಠ್ಯಪುಸ್ತಕವನ್ನು ಅದಮಾರು ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು​ ಅದಮಾರು ಮಠದಲ್ಲಿ ಅನಾವರಣಗೊಳಿಸಿದರು.ಮುಖ್ಯ ಅಭ್ಯಾಗತರಾಗಿ ಪೂರ್ಣಪ್ರಜ್ಞಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಶ್ರೀ ಪ್ರದೀಪ್​ ಕುಮಾರ್ ಉಪಸ್ಥಿತರಿದ್ದರು.

ಪೂರ್ಣಪ್ರಜ್ಞ ಕಾಲೇಜಿನ ಪ್ರಾಚಾರ್ಯರಾದ ಡಾ| ರಾಘವೇಂದ್ರ ಎ, ಉಪಪ್ರಾಚಾರ್ಯರಾದ ಡಾ| ಪ್ರಕಾಶ್ ರಾವ್, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಚಾರ್ಯರಾದ ಡಾ| ಸುಕನ್ಯಾ​ ಮೇರಿ ಜೆ, ಉಪ ಪ್ರಾಚಾರ್ಯರಾದ ಸಂದೀಪ್‌ಕುಮಾರ್ ಸತ್ಯಮೂರ್ತಿ, ಎಂ.​ಕಾಂ. ನ ಸಂಯೋಜಕರಾದ ಡಾ|​ ಎಚ್ ವಿ ಸೋಮಯಾಜಿ ಮತು ಕಾಲೇಜಿನ ಉಪನ್ಯಾಸಕರುಉಪಸ್ಥಿತರಿದ್ದರು.

ಪಠ್ಯಪುಸ್ತಕದ ಸಹ ಲೇಖಕರಾದ ನಾಗರಾಜ್ ಆಚಾರ್ಯ ಗಿಳಿಯಾರುಅತಿಥಿಗಳನ್ನು ಸ್ವಾಗತಿಸಿ​, ಕಾರ್ಯಕ್ರಮ ನಿರೂಪಿಸಿದರು.​ ​ಸಹ ಲೇಖಕರಾದ ಸಂತೋಷ್ ಆಚಾರಿ ವಿ ವಂದನಾಪರ್ಣೆಗೈದರು.​​
 
 
 
 
 
 
 
 
 
 
 

Leave a Reply