“ಸಮಾಜದಲ್ಲಿ ಅವಮಾನ ಅನುಮಾನ ಹೆಚ್ಚಾಗಿರುತ್ತದೆ. ಅದನ್ನು ಮೆಟ್ಟಿ ನಿಂತು ಜೀವನ ಸಾಗಿಸಬೇಕು. ನಾವು ಕೆಲಸವನ್ನು ಪಡೆದುಕೊಳ್ಳಬೇಕೇ ಹೊರತು ಕೆಲಸವನ್ನು ಕೇಳಿಕೊಂಡು ಹೋಗಬಾರದು. ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಗೌರವವನ್ನುನೀಡಬೇಕು.
ಭಾರತದಲ್ಲಿ ಸಂತೋಷದಿಂದ ಬದುಕುವವರ ಪ್ರಮಾಣ ಕಡಿಮೆಯಾಗಿದೆ. ವಿಶ್ವ ಸಂಸ್ಥೆಯ ವಿಶ್ವ ಸಂತೋಷ ವರದಿ 2021ರ ಪ್ರಕಾರ ಜಗತ್ತಿನ ಸಂತೋಷ ದಿಂದ ಬದುಕುವ ಜನರ 156 ದೇಶಗಳಲ್ಲಿ ಭಾರತ 144 ನೇ ಸ್ಥಾನದಲ್ಲಿದೆ.
ಫಿನ್ಲ್ಯಾಂಡ್, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ.” ಎಂದುಕ್ರಾಸ್ ಲ್ಯಾಂಡ್ ಕಾಲೇಜಿನ ಗ್ರಾಮೀಣಾಭಿವೃದ್ಧಿ ವಿಭಾಗದ ಮುಖ್ಯಸ್ಥರಾದ ಡಾ. ರಾಬರ್ಟ್ ಕ್ಲೈವ್ ಹೇಳಿದರು.
ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂ ಸೇವಕರಿಗೆ ‘ಬೆಳವಣಿಗೆ- ಸಂತೋಷ –ಸಮೃದ್ಧಿ’ ಎಂಬ ವಿಷಯದ ಕುರಿತಾದ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಯಾಗಿ ನಡೆಸಿಕೊಟ್ಟರು.
“ಬೆಳವಣಿಗೆ – ಸಂತೋಷ – ಸಮೃದ್ಧಿ” ಎನ್ನುವುದು ಹೊರಗಿನಿಂದ ಪಡೆಯಲಾಗು ವುದಿಲ್ಲ, ಅನುಭವಿಸುವುದರಲ್ಲಿ ಇರುತ್ತದೆ. ಕೇವಲ ಭೌತಿಕ ಸಂಪತ್ತೇ ಸಂಪತ್ತಲ್ಲ.
ಮೂರ್ತದಿಂದ ಅಮೂರ್ತದೆಡೆಗೆ ಹೋಗುವ ಮಾನಸಿಕ ಸ್ಥಿತಿಯನ್ನು ಕಂಡು ಕೊಂಡರೆ ಮಾತ್ರ ಆನಂದವನ್ನು ಪಡೆಯಬಹುದು. ಜೀವನವು ಶಾಶ್ವತವಲ್ಲ ಜೀವನವು ಒಂದು ಕೊಡುಗೆ ಅದನ್ನು ಸಂತೋಷದಿಂದ ಸಾಗಿಸಿ ಸುಖಿಸಬೇಕು. ಎಲ್ಲವೂ ಶಿಕ್ಷಣ ದಿಂದ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಸುಕನ್ಯಾ ಮೇರಿ ಜೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಟ್ಟು ಲಕ್ಷ್ಮೀನಾರಾಯಣ ರಾವ್ ಭಾಗವಹಿಸಿದ್ದರು.
ಎನ್.ಎಸ್.ಎಸ್ ಯೋಜನಾಧಿಕಾರಿ ರಮಾನಂದ ರಾವ್ ಕಾರ್ಯಕ್ರಮವನ್ನು ಆಯೋಜಿಸಿ ಸ್ವಾಗತಿಸಿದರು. ಸ್ವಯಂಸೇವಕಿ ಅಖಿಲಾ ಹೆಗಡೆ ನಿರೂಪಿಸಿದರು. ಯೋಜನಾಧಿಕಾರಿ ಶ್ರೀಲತಾ ಆಚಾರ್ಯ ವಂದಿಸಿದರು.