ಶ್ರೀ ಪೂರ್ಣಪ್ರಜ್ಞ ಸಂಧ್ಯಾಕಾಲೇಜಿನ ವಾರ್ಷಿಕ ಕ್ರೀಡಾಕೂಟ

ಉಡುಪಿ: ಮೈತುಂಬ ಆಟ ಆಡಿ, ಮನ ತುಂಬಾ ಪಾಠ ಕೇಳಿ, ಮನನ ಮಾಡಿ ಶೈಕ್ಷಣಿಕ ಸಾಧನೆ ಮಾಡಬೇಕು. ಕೈತುಂಬಾ ಸಂಬಳ ಪಡೆದು ಮನೆಯವರನ್ನು ಚೆನ್ನಾಗಿ ನೋಡಿಕೊಂಡು ಅಗತ್ಯಷಇರುವವರಿಗೆ ಮನತುಂಬಿ ಸಹಾಯ ಮಾಡಬೇಕು. ದೇಹ ಮತ್ತು ಮನಸ್ಸಿನ ಪ್ರಪುಲ್ಲತೆಗೆ ಕ್ರೀಡೆ ಅಗತ್ಯ ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾಕಾಲೇಜಿನ ವಾರ್ಷಿಕಕ್ರೀಡಾಕೂಟವನ್ನು ಉದ್ಘಾಟಿಸಿ ಶ್ರೀಪಾದರು ಆಶೀರ್ವಚಿಸಿದರು. ಉಡುಪಿ ಜಿಲ್ಲಾಕ್ರೀಡಾ ಮತ್ತುಯುವ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ. ರೋಷನ್‌ಕುಮಾರ್ ಶೆಟ್ಟಿ ಕ್ರೀಡಾಕೂಟವನ್ನು ಘೋಷಿಸಿ ಮಾತನಾಡಿ, ಕ್ರೀಡೆಗೆ ಬೇಕಾದ ಮೂಲಭೂತ ಅವಶ್ಯಕತೆಗಳು ನಮ್ಮ ಜಿಲ್ಲೆಯಲ್ಲಿವೆ. ಸಿಂಥೆಟಿಕ್ ಟ್ರ‍್ಯಾಕ್ ವ್ಯವಸ್ಥೆಕೂಡಾಇದೆ. ಯುವಜನರು ಸರಿಯಾದ ರೀತಿಯಲ್ಲಿಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ೪೦ ವರ್ಷಕ್ಕಿಂತಮೇಲ್ಪಟ್ಟವರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುತ್ತಿರುವುದು ವಿಶೇಷವಾಗಿದೆ. ಪಠ್ಯದಜೊತೆ ಪಠ್ಯೇತರ ಚಟುವಟಿಕೆಗಳಿಂದ ದೈಹಿಕ ಕ್ಷಮತೆಯೊಂದಿಗೆ ಹೆಚ್ಚಾಗಿ ಮಾನಸಿಕ ಸ್ಥಿಮಿತತೆ ಹೆಚ್ಚುತ್ತದೆ. ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಈ ಕ್ರೀಡಾಕೂಟಒಲಿಂಪಿಕ್ ಮಾದರಿಯಲ್ಲಿಯೇ ನಿಯಮಗಳನ್ನು ಪಾಲಿಸಿ ಶಿಸ್ತುಬದ್ಧವಾಗಿ ಸಂಘಟಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಕ್ರೀಡಾಳುಗಳಿಗೆ ಕುಮಾರಿ ಶೈವಿ ಶೆಟ್ಟಿಹಾಗೂ ಕ್ರೀಡಾಧಿಕಾರಿಗಳಿಗೆ ಉಪನ್ಯಾಸಕ ರಾಘವೇಂದ್ರ ಜಿ. ಜಿ.ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನುಕಾಲೇಜಿನ
ಪ್ರಾಚಾರ್ಯೆಡಾ. ಸುಕನ್ಯಾ ಮೇರಿಜೆ.ವಹಿಸಿದ್ದರು. ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ವಿದ್ಯಾರ್ಥಿ ಸಂಘದಅಧ್ಯಕ್ಷ ಅಮೋಘ ಹೆಗಡೆ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಗೌತಮಿ ನಿರೂಪಿಸಿದರು. ತನ್ವಿಶೆಟ್ಟಿ
ವಂದಿಸಿದರು.ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥಜೋಗಿ ಕಾರ್ಯಕ್ರಮವನ್ನು
ಸಂಘಟಿಸಿ,ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಕ್ಷೇಮಪಾಲನಾಧಿಕರಿ ಡಾ.
ರಾಮಕೃಷ್ಣ ಉಡುಪ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply