‘ಪೊಲೀಸ್ ಅಧಿಕಾರಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ’

ಉಡುಪಿ ಬಾಲಕಿಯರ ಪ ಪೂ ಕಾಲೇಜಿನ ಪ್ರೌಢಶಾಲಾ ಗ್ರಾಹಕ ಕ್ಲಬ್ ಹಾಗೂ ಎನ್ಎಸ್ಎಸ್ ಘಟಕದ ಆಶ್ರಯದಲ್ಲಿ ‘ಪೊಲೀಸ್ ಅಧಿಕಾರಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ’ ಕಾರ್ಯಕ್ರಮವನ್ನು ಉಡುಪಿ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಂಜುನಾಥ್ ನಡೆಸಿಕೊಟ್ಟರು.

ಟ್ರಾಫಿಕ್ ನಿಯಮಗಳು, ತಂಬಾಕು, ಡ್ರಗ್ಸ್, ಗಾಂಜಾ, ಅಫೀಮ್ ಮುಂತಾದ ಮಾದಕ ದೃವ್ಯ ಅಪರಾಧಗಳಲ್ಲಿ ಸಮಾಜಘಾತಕ ವ್ಯಕ್ತಿಗಳು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿರುವ ಕುರಿತು ಎಳೆ- ಎಳೆಯಾಗಿ ವಿವರಿಸಿ ಎಚ್ಚರಿಕೆಯಲ್ಲಿರುವಂತೆ ಸಲಹೆ ನೀಡಿದರು.

ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷೆ ತಾರಾದೇವಿ ಎಚ್ ಸಂಸ್ಥೆಯ ಪರವಾಗಿ ಮಂಜುನಾಥ್ ರವರನ್ನು ಸಮ್ಮಾನಿಸಿದರು. ಸಮಿತಿಯ ಸದಸ್ಯೆ ಲತಾ, ಎನ್ಎಸ್ಎಸ್ ಸಂಚಾಲಕಿ ಮಂಜುಳಾ, ಗ್ರಾಹಕ ಕ್ಲಬ್ ನಾಯಕಿ ಭಾಗ್ಯಶ್ರೀ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ ಸ್ವಾಗತಿಸಿದರು.ಸಹ ಶಿಕ್ಷಕಿ ಜಯಲಕ್ಷ್ಮಿ ವಂದಿಸಿದರು. ಸಂಸ್ಕೃತ ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. 

 
 
 
 
 
 
 
 
 
 
 

Leave a Reply