ವಿದ್ಯಾರ್ಥಿ ಸಂಘದ ಉದ್ಘಾಟನೆಯು ಸಂಸ್ಥೆಯ ಬುದ್ಧಾಯುರ್ವೇದ ಸಭಾಭವನದಲ್ಲಿ ಪೂರ್ವಾಹ್ನ 10.00 ಘಂಟೆಗೆ ನಡೆಯಲಿರುವುದು. ಸಾಯಿರಾಧ ಗ್ರೂಪ್ಸ್ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮನೋಹರ್ ಎಸ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು.
ತದನಂತರ ಅಪರಾಹ್ನ 4.00ರಿಂದ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಪದವಿ ಪ್ರಧಾನ ಸಮಾರಂಭವು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ, ಉಡುಪಿ ಇಲ್ಲಿ ನಡೆಯಲಿದೆ. ಇದರ ಮುಖ್ಯ ಅತಿಥಿಗಳಾಗಿ ಸಹ- ಕುಲಪತಿಗಳು, ಮಾಹೆ ಹಾಗು ಅಕಾಡೆಮಿ ಅಫ್ ಜನರಲ್ ಎಜುಕೇಶನ್, ಮಣಿಪಾಲ ಇದರ ಅಧ್ಯಕ್ಷರಾದ ಡಾ. ಎಚ್. ಎಸ್. ಬಲ್ಲಾಳ್ ಅವರು ಭಾಗವಹಿಸಲಿರುವರು.