ಸೆಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯ ಸೌಹಾರ್ಧಾ ಸಭಾಭವನದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಚರ್ಚಿನ ಧರ್ಮಗುರುಗಳಾದ ವಂದನೀಯ ಅನಿಲ್ ಪ್ರಕಾಶ್ ಕ್ಯಾಸ್ತೆಲಿನೋ, ವಂದನೀಯ ರೋಮನ್ ಮಸ್ಕರೇನ್ಹಸ್ ಪಾಲನಾಮಂಡಳಿಯ ಉಪಾಧ್ಯಕ್ಷರು ಶ್ರೀ ವಿನ್ಸೆಂಟ್ ಡಿ’ಸೋಜಾ ಹಾಗೂ ಇತರರು ಉಪಸ್ಥಿತರಿದ್ದರು. ಧರ್ಮಗುರುಗಳು ಕೋವಿಡ್-19 ಹಾಗೂ ನೂತನ ಸರಕಾರದ ನೂತನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಿದರು..
ಈ ಸಂಧರ್ಭದಲ್ಲಿ ದೇವಾಲಯದ ಧಾರ್ಮಿಕತೆಗೆ ಸಂಭಂಧಪಟ್ಟ ಕೆಲಸ ಕಾರ್ಯವನ್ನು ಮಾಡುತ್ತಿದ್ದ ಹಾಗೂ ಕೊಳಲಗಿರಿ ಸಂತ ಕ್ಷೇವಿಯರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಯನಿ ಕರ್ತವ್ಯವನ್ನು ನಿರ್ವಹಿಸಿ ನಿವೃತ್ತಿ ಹೊಂದಿದ ಸಿಸ್ಟರ್ ಲವೀನಾರವರಿಗೆ ಸನ್ಮಾನಿಸಲಾಯಿತು..