ಶ್ರೀ ಕಾಶೀಮಠ ಸಂಸ್ಥಾನ ಕ್ಷೇಮಾಬ್ಯುದಯ ನಿಧಿಯಿಂದ ಪ್ರತಿಭಾ ಪುರಸ್ಕಾರ

ಉಡುಪಿ  ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ  ಶ್ರೀ ಕಾಶೀಮಠ ಸಂಸ್ಥಾನ   (WEL FARE )  ಕ್ಷೇಮಾಬ್ಯುದಯ ನಿಧಿ ವತಿಯಿಂದ   ಶ್ರೀ ಭುವನೇಂದ್ರ ಮಂಟಪದಲ್ಲಿ ಇಂದು   PHD , ಡಿಗ್ರಿ  ಉನ್ನತ ವ್ಯಾಸಂಗದಲ್ಲಿ  ರಾಂಕ್ ವಿಜೇತರಿಗೆ ,  ಎಸ್ ಎಸ್ ಎಲ್ ಸಿ  ಹಾಗೂ  ಪಿ ಯು ಸಿಯಲ್ಲಿ  ವಿಶೇಷ ಸಾಧನೆ ಗೈದ ವಿದ್ಯಾರ್ಥಿಗಳಿಗೆ  ಪ್ರತಿಭಾ  ಪುರಸ್ಕಾರ  ಸಮಾರಂಭ ನಡೆಯಿತು. 

ಮುಖ್ಯ ಅತಿಥಿ ಡಾ  ವಿ ಎಲ್ ನಾಯಕ್  ಮತ್ತು ವಿಜಯ ಲಕ್ಷ್ಮೀ  ನಾಯಕ್ ,  ಸಾಧನೆಗೈದ  ವಿದ್ಯಾರ್ಥಿಗಳಿಗೆ ಕಾಶೀ ಮಠಾಧೀಶರ ಹಸ್ತಾಕ್ಷರದ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಿದರು. 
 ಬಳಿಕ   ಅತಿಥಿಗಳನ್ನು ದೇವಳದ ವತಿಯಿಂದ ಗೌರವಿಸಲಾಯಿತು. ದೇವಳದ ಆಡಳಿತ ಮುಕ್ತೇಶ್ಸರ ಪಿ.ವಿ ಶೆಣೈ  ಸ್ವಾಗತಿಸಿದರು. ಈ ಸಂದರ್ಭದಲ್ಲಿ  ಪುಂಡಲೀಕ ಕಾಮತ್  ,  ರೋಹಿತಾಕ್ಷ ಪಡಿಯಾರ, ಪ್ರಭಾಕರ್ ಪೈ ಉಪಸ್ಥಿತರಿದ್ದರು.  ದಿನೇಶ ಶೆಣೈ ನಿರೂಪಿಸಿದರು. ದೀಪಕ್ ಶೆಣೈ ವಂದಿಸಿದರು.
 
 
 
 
 
 
 
 
 
 
 

Leave a Reply