ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶ್ರೀ ಕಾಶೀಮಠ ಸಂಸ್ಥಾನ (WEL FARE ) ಕ್ಷೇಮಾಬ್ಯುದಯ ನಿಧಿ ವತಿಯಿಂದ ಶ್ರೀ ಭುವನೇಂದ್ರ ಮಂಟಪದಲ್ಲಿ ಇಂದು PHD , ಡಿಗ್ರಿ ಉನ್ನತ ವ್ಯಾಸಂಗದಲ್ಲಿ ರಾಂಕ್ ವಿಜೇತರಿಗೆ , ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿಯಲ್ಲಿ ವಿಶೇಷ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ಮುಖ್ಯ ಅತಿಥಿ ಡಾ ವಿ ಎಲ್ ನಾಯಕ್ ಮತ್ತು ವಿಜಯ ಲಕ್ಷ್ಮೀ ನಾಯಕ್ , ಸಾಧನೆಗೈದ ವಿದ್ಯಾರ್ಥಿಗಳಿಗೆ ಕಾಶೀ ಮಠಾಧೀಶರ ಹಸ್ತಾಕ್ಷರದ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಿದರು.
ಬಳಿಕ ಅತಿಥಿಗಳನ್ನು ದೇವಳದ ವತಿಯಿಂದ ಗೌರವಿಸಲಾಯಿತು. ದೇವಳದ ಆಡಳಿತ ಮುಕ್ತೇಶ್ಸರ ಪಿ.ವಿ ಶೆಣೈ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪುಂಡಲೀಕ ಕಾಮತ್ , ರೋಹಿತಾಕ್ಷ ಪಡಿಯಾರ, ಪ್ರಭಾಕರ್ ಪೈ ಉಪಸ್ಥಿತರಿದ್ದರು. ದಿನೇಶ ಶೆಣೈ ನಿರೂಪಿಸಿದರು. ದೀಪಕ್ ಶೆಣೈ ವಂದಿಸಿದರು.