ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಇಲ್ಲಿ ಗಾಂಧಿ ಜಯಂತಿಯನ್ನು ಸಂಸ್ಥೆಯ ಉಪಾಧ್ಯಕ್ಷ ಸಚ್ಚಿದಾನಂದ ಅಡಿಗರು ದೀಪವನ್ನು ಬೆಳಗಿಸಿ ಗಾಂಧೀಜಿ ಅವರ ಜೀವನ ಶೈಲಿ ನಮಗೆ ಆದರ್ಶ ಹಾಗೂ ಮಾದರಿಯಾಗಿದೆ. ಅವರ ನವೀನ ಶಿಕ್ಷಣ ಪದ್ಧತಿಯು ಅಭಿವ್ರದ್ದಿಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜೇಸಿಐ ಬ್ರಹ್ಮಾವರ ಪ್ರಾಯೋಜಿತ ರಾಜ್ಯಮಟ್ಟದ ಆನ್ ಲೈನ್ ಭಾಷಣ ಸ್ಪರ್ಧೆ ಯಲ್ಲಿ ತ್ರತೀಯ ಬಹುಮಾನ ಪಡೆದ ಶಾಲೆಯ ವಿದ್ಯಾರ್ಥಿ ಆಶ್ರಿತಾ ಇವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಡ್ಡರ್ಸೆ ಪ್ರಕಾಶ್ ಆಚಾರ್ಯರು ವಿದ್ಯಾರ್ಥಿಗಳು ಶಾಲೆಯ ಆಸ್ತಿ, ಅವರ ಪ್ರತಿಭೆಯನ್ನು ಗುರುತಿಸುವ ಕಾರ್ಯ ಶಾಲೆಯಲ್ಲಿ ನಿರಂತರವಾಗಿ ನಡೆಯಬೇಕು, ಜೊತೆಗೆ ರಾಷ್ಟ್ರ ನಾಯಕರ ಮಾದರಿ ವ್ಯಕ್ತಿ ಗಳ ಸಾಧಕರ ಜೀವನ ಚರಿತ್ರೆ ಯನ್ನು ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಹೇಳಬೇಕು, ಆಗ ವಿದ್ಯಾರ್ಥಿಗಳು ತಾವು ಕೂಡ ಅವರಂತೆ ಆಗಬೇಕು ಎಂಬ ಮನೋಭಾವ ಬೆಳೆಯುತ್ತದೆ ಎಂದು ಹೇಳಿದರು
ಸಭೆಯಲ್ಲಿ ಶಾಲಾ ಸಂಚಾಲಕ ಶಶಿಧರ ದೇವಾಡಿಗ, ಶಿಕ್ಷಕ ವಸಂತ ಕುಮಾರ ಶೆಟ್ಟಿ, ವಿದ್ಯಾರ್ಥಿ ಆಶ್ರಿತಾ ಉಪಸ್ಥಿತರಿದ್ದರು. ಶಿಕ್ಷಕ ವಿಘ್ನೇಶ್ ದೇವಾಡಿಗ ಸ್ವಾಗತಿಸಿದರು ಶಿಕ್ಷಕಿ ಸ್ವಾತಿ ಶೆಟ್ಟಿ ವಂದಿಸಿದರು ಶಿಕ್ಷಕಿ ಮಂಜುಳ ನಿರೂಪಿಸಿದರು