ಅಮಾಸೆಬೈಲುಡ್ಯುಯಲ್ ಸ್ಟಾರ್ ಶಾಲೆಯಲ್ಲಿ ಗಾಂಧಿ ಜಯಂತಿ

ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಇಲ್ಲಿ ಗಾಂಧಿ ಜಯಂತಿಯನ್ನು ಸಂಸ್ಥೆಯ ಉಪಾಧ್ಯಕ್ಷ ಸಚ್ಚಿದಾನಂದ ಅಡಿಗರು ದೀಪವನ್ನು ಬೆಳಗಿಸಿ ಗಾಂಧೀಜಿ ಅವರ ಜೀವನ ಶೈಲಿ ನಮಗೆ ಆದರ್ಶ ಹಾಗೂ ಮಾದರಿಯಾಗಿದೆ​. ​ ಅವರ ನವೀನ ಶಿಕ್ಷಣ ಪದ್ಧತಿಯು ಅಭಿವ್ರದ್ದಿಗೆ ಪೂರಕವಾಗಿದೆ ಎಂದು ಅ‌ಭಿಪ್ರಾಯಪಟ್ಟರು​. ​
ಈ ಸಂದರ್ಭದಲ್ಲಿ ಜೇಸಿಐ ಬ್ರಹ್ಮಾವರ  ಪ್ರಾಯೋಜಿತ ರಾಜ್ಯಮಟ್ಟದ ಆನ್ ಲೈನ್ ಭಾಷಣ ಸ್ಪರ್ಧೆ ಯಲ್ಲಿ ತ್ರತೀಯ ಬಹುಮಾನ ಪಡೆದ ಶಾಲೆಯ ವಿದ್ಯಾರ್ಥಿ ಆಶ್ರಿತಾ ಇವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು​. ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಡ್ಡರ್ಸೆ ಪ್ರಕಾಶ್‌ ಆಚಾರ್ಯರು  ವಿದ್ಯಾರ್ಥಿಗಳು ಶಾಲೆಯ ಆಸ್ತಿ​, ಅವರ ಪ್ರತಿಭೆಯನ್ನು ಗುರುತಿಸುವ ಕಾರ್ಯ ಶಾಲೆಯಲ್ಲಿ ನಿರಂತರವಾಗಿ ನಡೆಯಬೇಕು​, ಜೊತೆಗೆ ರಾಷ್ಟ್ರ ನಾಯಕರ ಮಾದರಿ ವ್ಯಕ್ತಿ ಗಳ ಸಾಧಕರ ಜೀವನ ಚರಿತ್ರೆ ಯನ್ನು ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಹೇಳಬೇಕು​, ಆಗ ವಿದ್ಯಾರ್ಥಿಗಳು ತಾವು ಕೂಡ ಅವರಂತೆ ಆಗಬೇಕು ಎಂಬ ಮನೋಭಾವ ಬೆಳೆಯುತ್ತದೆ ಎಂದು ಹೇಳಿದರು 
ಸಭೆಯಲ್ಲಿ ಶಾಲಾ ಸಂಚಾಲಕ ಶಶಿಧರ ದೇವಾಡಿಗ​, ಶಿಕ್ಷಕ ವಸಂತ ಕುಮಾರ ಶೆಟ್ಟಿ​, ವಿದ್ಯಾರ್ಥಿ ಆಶ್ರಿತಾ ಉಪಸ್ಥಿತರಿದ್ದರು​.  ಶಿಕ್ಷಕ ವಿಘ್ನೇಶ್ ದೇವಾಡಿಗ ಸ್ವಾಗತಿಸಿದರು ಶಿಕ್ಷಕಿ ಸ್ವಾತಿ ಶೆಟ್ಟಿ ವಂದಿಸಿದರು​​ ಶಿಕ್ಷಕಿ ಮಂಜುಳ ನಿರೂಪಿಸಿದರು
 
 
 
 
 
 
 
 
 
 
 

Leave a Reply