ತೆಂಕನಿಡಿಯೂರು ಕಾಲೇಜು: 6 ರ‍್ಯಾಂಕು, 5 ಚಿನ್ನದ ಪದಕ, 10 ನಗದು ಬಹುಮಾನ

ಉಡುಪಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಸ್ನಾತಕೋತ್ತರ ಪರೀಕ್ಷೆಗಳಲ್ಲಿ 6 ರ‍್ಯಾಂಕುಗಳಿಸಿದೆ.  ಕನ್ನಡ ವಿಭಾಗ ಕು. ರಜನಿ ಕನ್ನಡ ಎಂ.ಎ. ಯಲ್ಲಿ ಪ್ರಥಮ ರ‍್ಯಾಂಕು.  ಇತಿಹಾಸ ವಿಭಾಗದಲ್ಲಿ ರಕ್ಷಿತಾ ಇತಿಹಾಸ ಎಂ.ಎ. ಪ್ರಥಮ ರ‍್ಯಾಂಕು, ದೀಪಿಕಾ ಸಮಾಜಶಾಸ್ತ್ರ, ಎಂ.ಎ. ಯಲ್ಲಿ ಪ್ರಥಮ ರ‍್ಯಾಂಕು ಪಡೆದಿದ್ದಾರೆ.  ವಾಣಿಜ್ಯಶಾಸ್ತ್ರ ಭಾಗದಲ್ಲಿ ಕಾವ್ಯ ಕೆ.ಬಿ. 5ನೇ ರ‍್ಯಾಂಕು, ಸಾಂಘವಿ ಉರಾಳ ಮತ್ತು ಪ್ರತೀಕ್ಷಾ ಏಳನೇ ರ‍್ಯಾಂಕು ಪಡೆದಿದ್ದಾರೆ.

ಚಿನ್ನದ ಪದಕಗಳು:  ರಜನಿ  ಕನ್ನಡ ಎಂ.ಎ. ಧರ್ಮಸ್ಥಳ ರತ್ನವರ್ಮ ಹೆಗ್ಡೆ ಸ್ಮಾರಕ ಚಿನ್ನದ ಪದಕ. ರಕ್ಷಿತಾ  ಇತಿಹಾಸ ಎಂ.ಎ. ದಿ. ಡಾ. ಪಾದೂರು ಗುರುರಾಜ ಭಟ್ ಸ್ಮಾರಕ ೨ ಚಿನ್ನದ ಪದಕಗಳು. ದೀಪಿಕಾ~  ಸಮಾಜಶಾಸ್ತ್ರ ಎಂ.ಎ. ಜಯರಾವ್ ಬಲ್ಲಾಳ್ ಸ್ಮಾರಕ ಚಿನ್ನದ ಪದಕ ಮತ್ತು ಪ್ರೊ. ಜೋಗನ್ ಶಂಕರ್ ಚಿನ್ನದ ಪದಕಗಳು.

ನಗದು ಬಹುಮಾನ:  ರಜನಿ – ಕನ್ನಡ ಎಂ.ಎ. ವಸಂತ ಅನಂತ ನಾರಾಯಣ ಮತ್ತು ಎಸ್. ಅನಂತ ನಾರಾಯಣ ನಗದು ಬಹುಮಾನ. ಎಂ.ಎಸ್. ಪುಟ್ಟಣ್ಣ ಎರಡು ನಗದು ಬಹುಮಾನ.  ಕನ್ನಡ ಸಿನಿಮಾ ಉತ್ಸವ ಸುವರ್ಣ ಹಬ್ಬದ ನಗದು ಬಹುಮಾನ, ಕೆರಾಡಿ ಸುಬ್ಬ ರಾವ್ ಸ್ಮಾರಕ ನಗದು ಬಹುಮಾನ, ಡಾ. ಬಿ. ದಾಮೋದರ ರಾವ್ ನಗದು ಬಹುಮಾನ.

ರಕ್ಷಿತಾ-  ಇತಿಹಾಸ ಎಂ.ಎ. ಪಾದೂರು ರಾಜ ಭಟ್ ಸ್ಮಾರಕ ನಗದು ಬಹುಮಾನ. ಡಾ. ಎಂ.ವಿ. ಶೆಟ್ಟಿ ಸ್ಮಾರಕ ಮತ್ತು, ಪ್ರೊ. ಶೇಕ್‌ಆಲಿ ಅಭಿನಂದನಾ ಸಮಿತಿಯ ನಗದು ಬಹುಮಾನ. ನಿತಿನ್ -ಇತಿಹಾಸ ಎಂ.ಎ. ವಸಂತ ಎಸ್. ಅನಂತ ನಾರಾಯಣ ಮತ್ತು ಎಸ್. ಅನಂತ ನಾರಾಯಣ  ನಗದು ಬಹುಮಾನ. ದೀಪಿಕಾ ಸಮಾಜಶಾಸ್ತ್ರ, ಎಂ.ಎ. ವಿಮೋಚನಾ ದೇವದಾಸಿ ಪುನರ್‌ವಸತಿ ಸಂಘ ಅಥಣಿ ನಗದು ಬಹುಮಾನ.

 
 
 
 
 
 
 
 
 
 
 

Leave a Reply