ಇನ್ಸ್ಟಿಟ್ಯೂಟ್ ಆಫ್ಚಾರ್ಟೆಡ್ ಅಕೌಂಟೆಂಟ್ಸ್ ಆಫ್ಇಂಡಿಯಾದ ಉಡುಪಿ ಶಾಖೆಯು ಸದಸ್ಯರು ಮತ್ತು ವಿದ್ಯಾರ್ಥಿಗಳಿಗಾಗಿ ಏಕದಿನ ಸಿಪಿಇ ಸೆಮಿನಾರ್ ಬ್ಯಾಂಕ್ ಶಾಖೆಗಳ ಶಾಸನಬದ್ಧ ಲೆಕ್ಕಪರಿಶೋಧನೆ ಯನ್ನು ಗುರುವಾರ ಉಡುಪಿಯ ಕುಂಜಿಬೆಟ್ಟಿನ ಐಸಿಎಐ ಭವನದಲ್ಲಿ ನಡೆಸಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಶಾಖೆಯ ಅಧ್ಯಕ್ಷರಾದ ಸಿಎ. ಕವಿತಾ ಎಂ ಪೈ ಟಿ ವಹಿಸಿದ್ದರು.
ಶಾಖೆಯ ಉಪಾಧ್ಯಕ್ಷ ಸಿಎ ಲೋಕೇಶ್ ಶೆಟ್ಟಿ, ಕಾರ್ಯದರ್ಶಿ ಸಿಎ ಪ್ರದೀಪ್ ಜೋಗಿ, ಖಜಾಂಚಿ ಸಿಎ. ಪ್ರಭಾಕರ ಎನ್.ನಾಯಕ್ ಮತ್ತು ಸಿಕಾಸಾ ಅಧ್ಯಕ್ಷ ಸಿ.ಎ.ನರಸಿಂಹ ನಾಯಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಡುಪಿ ಪ್ರಾದೇಶಿಕ ಮುಖ್ಯಸ್ಥ, ಬ್ಯಾಂಕ್ ಆಫ್ ಬರೋಡಾ ದ ಶ್ರೀ. ಜಿ ರವಿ ಎಚ್. ಜಿ., ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷ ಕವಿತಾ ಎಂ ಪೈ ಸ್ವಾಗತಿಸಿದರು. ಮುಖ್ಯ ಅತಿಥಿ ರವಿ ಎಚ್. ಜಿ ತಮ್ಮ ಭಾಷಣದಲ್ಲಿ “ಚಾರ್ಟರ್ಡ್ ಅಕೌಂಟೆಂಟ್ಗಳ ಲೆಕ್ಕಪರಿಶೋಧನೆಯ ವಿಭಾಗಗಳಲ್ಲಿ ಬ್ಯಾಂಕ್ ಶಾಖೆಯ ಲೆಕ್ಕಪರಿಶೋಧನೆಯು ಒಂದು ಮಹತ್ವದಾಗಿರುತ್ತದೆ.
ಆರೋಗ್ಯಕರ ಮತ್ತು ದೃಢವಾದ ಬ್ಯಾಂಕಿಂಗ್ ಕ್ಷೇತ್ರಕ್ಕೆ, ಸ್ಥಾಪಿತ ಕಾರ್ಯಕ್ಷಮತೆಯ ಮಾನದಂಡಗಳಿಗೆ ಅನುಗುಣವಾಗಿ ನಡೆಸಿದ ಲೆಕ್ಕಪರಿಶೋಧನೆಯಿಂದ ಬೆಂಬಲಿತವಾದ ವಿಶ್ವಾಸಾರ್ಹ ಹಣಕಾಸು ಮಾಹಿತಿಯು ಒಂದು ಪ್ರಮುಖ ಅಂಶವಾಗಿದೆ. ” ಕಾರ್ಯಕ್ರಮವನ್ನು ಶಾಖಾ ಕಾರ್ಯದರ್ಶಿ ಸಿ.ಎ.ಪ್ರದೀಪ್ ಜೋಗಿ ನಿರೂಪಿಸಿದರು.
ಡಾ.ಪಿ. ಸಿವ ರಾಮ ಪ್ರಸಾದ್, ಸಿ.ಎ. ಮುರಳಿ ಮೋಹನ್, ಸಿಎ ಪದ್ಮಶ್ರೀ ಕ್ರಾಸ್ಟೊ, ಮತ್ತು ವಕೀಲ ದೇವರಾಜ್ಶ ಶೆಟ್ಟಿಗಾರ್ ಉಪಸ್ಥಿತರಿದ್ದರು. ಸಿ ಎ ವಿದ್ಯಾರ್ಥಿಗಳಿಗೆ ಬ್ಯಾಂಕ್ ಶಾಖೆಗಳ ಲೆಕ್ಕಪರಿಶೋಧನೆಯ ಕುರಿತು ತಾಂತ್ರಿಕ ಅಧಿವೇಶನ ನೀಡಿದರು.