ಮಹಿಳಾ ಗುಂಪುಗಳಿಗೆ ಗೃಹ ಉತ್ಪನ್ನಗಳ ಬಗ್ಗೆ ಪ್ರಾತ್ಯಕ್ಷತೆ 

ಮಣಿಪಾಲ : ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ, ಉಡುಪಿ ಮತ್ತು ಕೆನರಾ ಬ್ಯಾಂಕ್ ಜ್ಯುಬುಲಿ ಎಜ್ಯುಕೇಶನ್ ಫಂಡ್, ಬೆಂಗಳೂರು ಇವರ ಸಹ ಯೋಗದಲ್ಲಿ ಉಡುಪಿಯ ಪ್ರಾರ್ಥನಾ ಮಂದಿರದಲ್ಲಿ ಶನಿವಾರ ಮಹಿಳಾ ಗುಂಪುಗಳಿಗೆ ಗೃಹ ಉತ್ಪನ್ನಗಳಾದ ಸಾರು, ಸಾಂಬಾರು ಮತ್ತು ಕಷಾಯ ಪುಡಿಗಳು ಹಾಗು ಪುಳಿಯೋಗರೆ ಮಿಕ್ಸ್ ಇತ್ಯಾದಿಗಳ ಬಗ್ಗೆ ಪ್ರಾತ್ಯಕ್ಷತೆ ಮೂಲಕ ತರಬೇತಿಯನ್ನು ನೀಡಲಾಯಿತು.
ಸುಮಾರು 25ಮಂದಿ ಭಾಗವಹಿಸಿದ್ದರು. ಸಂಪನ್ನೂಲ ವ್ಯಕ್ತಿಯಾಗಿ ಬಿವಿಟಿಯ ಗೀತಾ ರಾವ್, ಮಾನವ ಸಂಪನ್ನೂಲ ಅಧಿಕಾರಿ ಸಹಕರಿಸಿದ್ದರು. ಮಹಿಳೆಯರು ಸಕ್ರಿಯಾವಾಗಿ ಭಾಗವಹಿಸಿ ತಾವು ಕಲಿತ ವಿಷಯವನ್ನು ಮುಂದುವರಿಸಿ ಸ್ವ-ಉದ್ಯೋಗ ಮಾಡುವ ಇಚ್ಛೆಯನ್ನು ವ್ಯಕ್ತ ಪಡಿಸಿದರು.
ಪ್ರಾರ್ಥನಾಲಯದ ಗುರುಗಳು ಪ್ರಾರ್ಥನೆಯನ್ನು ಸಲ್ಲಿಸಿ ಶುಭ ಕಾಮನೆಯನ್ನು ಹೇಳುತ್ತಾ ಆಗಮಿಸಿದ ಎಲ್ಲರಿಗೂ ಸ್ವಾಗತವನ್ನು ಕೋರಿದರು. ಬಿವಿಟಿಯ ಕಾರ್ಯಕ್ರಮ ಸಂಯೋಜಕಿ ಎ.ಲಕ್ಷ್ಮೀ ಬಾಯಿಯವರು ಪ್ರಸ್ಥಾವಿಸಿದರು. ಕಾರ್ಯಕ್ರಮದ ಸಂಘಟಕಿ ಆಶಾ ನಿಲಯದ ಜಯವಿಜಯ ಧನ್ಯವಾದವನ್ನಿತ್ತರು. 
 
 
 
 
 
 
 
 
 
 
 

Leave a Reply