‘ಅಂಚೆ ಕಾರ್ಡ್ ಮೂಲಕ ಶಿಕ್ಷಣ’

ರಾಷ್ಟ್ರೀಯ ಅಂಚೆ ಸಪ್ತಾಹದ ಪ್ರಯುಕ್ತ ಟಪ್ಪಾಲು ದಿನದ ಅಂಗವಾಗಿ ಉಡುಪಿ ಅಂಚೆ ವಿಭಾಗ ಮತ್ತು ಉಪೇಂದ್ರ ಪೈ ಮೆಮೊರಿಯಲ್ ಕಾಲೇಜಿನ ಜಂಟಿ  ಆಶ್ರಯದಲ್ಲಿ ‘ಅಂಚೆಕಾರ್ಡ್ ಮುಖಾಂತರ ಶಿಕ್ಷಣ’ ಎಂಬ ವಿನೂತನ ಕಾರ್ಯಕ್ರಮವು ಕುಂಜಿಬೆಟ್ಟು ಯು.ಪಿ.ಎಂ.ಸಿ ಸಭಾಭವನದಲ್ಲಿ ಅಕ್ಟೋಬರ್ 15 ರಂದು ನಡೆಯಿತು.

ಈವರೆಗೆ ಆನ್ಲೈನ್ ನಲ್ಲಿ ನಡೆಸಿದ ಪಾಠಗಳ ಚುಟುಕು ಪ್ರಶ್ನೆಗಳನ್ನು ಅಂಚೆಕಾರ್ಡ್ ಲ್ಲಿ   ಬರೆದು ಮಕ್ಕಳಿಗೆ ತಲುಪಿಸಿ ಅವರಿಂದ ಪ್ರತಿಕ್ರಿಯೆ ಕಾರ್ಡ್ ಲ್ಲಿ ಉತ್ತರ ಬರೆಯಿಸಿ ಪಡೆಯುವ ಒಂದು ವಿಶಿಷ್ಟ ಪ್ರಯೋಗವನ್ನು ಕಾಲೇಜಿನಲ್ಲಿ ನಡೆಸ ಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಉಪನ್ಯಾಸಕರ ಪ್ರಶ್ನಾವಳಿಗಳ ಕಾರ್ಡ್ ನ್ನು ಉಡುಪಿ ಅಂಚೆ ವಿಭಾಗದ ಉಪ ಅಧೀಕ್ಷಕ ಶ್ರೀ ಧನಂಜಯ ಆಚಾರ್ ಇವರಿಗೆ ಹಸ್ತಾಂತರಿಸಿದರು.

ಉಡುಪಿ ಅಂಚೆ ಇಲಾಖೆಯ ಮಾರುಕಟ್ಟೆ ವಿಭಾಗದ ಶ್ರೀಮತಿ ಪೂರ್ಣಿಮಾ ಜನಾರ್ದನ್ ಅಂಚೆ ದಿನದ ಬಗೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಉಡುಪಿ ಅಂಚೆ ಇಲಾಖೆಯ ಸಿಬ್ಬಂದಿಗಳು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು  ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು, ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಕೋಟ್ಯಾನ್ ಸ್ವಾಗತಿಸಿದರು, ವಾಣಿಜ್ಯ ಉಪನ್ಯಾಸಕ ಶ್ರೀ ಹರಿಕೇಶವ್ ವಂದಿಸಿದರು, ಕಾಲೇಜಿನ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ಈ ವಿನೂತನ ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು
 
 
 
 
 
 
 
 
 
 
 

Leave a Reply