ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ಸಂವಿಪ್ರ ಸಂಭ್ರಮ -2020ರಲ್ಲಿ ಆಯೋಜಿಸಿದ್ದ ಕಥಾ ಸಪ್ತಾಹದ ಕೊನೆಯಲ್ಲಿ ಕಾಲೇಜು ವಿದ್ಯಾಥಿ೯ಗಳಿಗಾಗಿ ಕಥೆ ಕೇಳಿ- ಅನಿಸಿಕೆ ಕಳುಹಿಸಿ – ಬಹುಮಾನ ಗಳಿಸಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕಾವ್ಯಾ ಹಂದೆ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ಪಡೆದಿದ್ದು, ದ್ವಿತೀಯ ಕೀರ್ತಿ .ಎಸ್ ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ , ತೃತಿಯ ಸಂಗೀತ ಎನ್. ಶೆಟ್ಟಿ, ಕಮಲಾ ಬಾಳಿಗ ಕಾಲೇಜು ಕುಮಟಾ ಹಾಗೂ ದೀಕ್ಷಿತ್ ಕುಮಾರ್ ಕೆ. ಎಮ್.ಪಿ. ಇ.ಎಸ್ ಪದವಿ ಕಾಲೇಜು, ಮಂಡ್ಯ ಇವರು ಪಡೆದಿರುತ್ತಾರೆ. ತೀರ್ಪುಗಾರರ ಮೆಚ್ಚುಗೆ ಬಹುಮಾನವನ್ನು ಚಿನ್ಮಯ ಅಡಿಗ ಉಡುಪಿ, ಗಾನವಿ ಜಿ. ಉಡುಪಿ, ನಿಶ್ಮಿತಾ ಪೂಜಾರಿ ಶಿರ್ವ , ಕವಿತಾ ಎಮ್ ಅಂಗಡಿ ಹಾವೇರಿ ಪಡೆದಿರುತ್ತಾರೆ.
ಪ್ರಥಮ : ಕಾವ್ಯ ಹಂದೆ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ
ದ್ವಿತೀಯ: ಕೀರ್ತಿ ಎಸ್ ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ
ತೃತಿಯ : ಸಂಗೀತ ಎನ್. ಶೆಟ್ಟಿ ಕಮಲಾ ಬಾಳಿಗ ಕಾಲೇಜು ,ಕುಮಟ
ದೀಕ್ಷಿತ್ ಕುಮಾರ್ ಕೆ .ಎಮ್
ಪಿ. ಇ .ಎಸ್ ಕಾಲೇಜು, ಮಂಡ್ಯ
ಪೂರ್ಣಿಮಾ ಜನಾರ್ದನ್ ಸಂಯೋಜನೆಯಲ್ಲಿ ಮೂಡಿ ಬಂದ ಕಥಾ ಸಪ್ತಾಹದಲ್ಲಿ ಕಥೆ ಕೇಳಿ- ಅನಿಸಿಕೆ ಕಳುಹಿಸಿ ಸ್ಪರ್ಧೆಯ ತೀರ್ಪುಗಾರರಾಗಿ ಡಾ| ರಶ್ಮಿ ಕುಂದಾಪುರ ಮತ್ತು ಡಾ| ಪ್ರಜ್ಞಾ ಮಾರ್ಪಳ್ಳಿ ಸಹಕರಿಸಿರುತ್ತಾರೆ ಎಂದು ಕಾರ್ಯದರ್ಶಿ ರವಿರಾಜ್ ಎಚ್.ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ