ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನವರಾತ್ರಿಯ ವಿಜಯದಶಮಿ ನಾದೋಪಾಸನೆಯ ಪಂಚರತ್ನ ಸಂಗೀತ ಗೋಷ್ಠಿ, ದೇವೀ ಅನವಾವರಣ ಕೃತಿಗಳ ಪ್ರಸ್ತುತಿಯ ಮೊದಲು, ಯುವ ಪ್ರತಿಭೆ ಕು. ದಿವ್ಯಶ್ರೀ ಮಣಿಪಾಲ ಇವರಿಗೆ ಬಿಜೂರಿನ ಶ್ರೀಮಹಾ ದೇವ ಸಾಂಸ್ಕ್ಫತಿಕ ಪ್ರತಿಷ್ಠಾನದ ವತಿಯಿಂದ 2020 ರ ಶ್ರೀಮಹಾದೇವ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಈ ಸರಳ ಸಂಗೀತ ಗೋಷ್ಠಿಯು ಪರ್ಕಳದ ಸರಿಗಮ ಭಾರತಿ ವಿದ್ಯಾಲಯದಲ್ಲಿ ಜರುಗಿತು. ಕಲಾಶಾಲೆಯ ಸಂಗೀತ ಗುರು ವಿದುಷಿ ಉಮಾ ಉದಯ ಶಂಕರ್ ಕಾರ್ಯಕ್ರಮ ಸಂಘಟಿಸಿದ್ದರು. ವೇದಿಕೆಯಲ್ಲಿ ಡಾ.ಗಣಪತಿ ಜೋಯಿಸ, ಡಾ ಉದಯ ಶಂಕರ್, ರಾಘವೇಂದ್ರ ಆಚಾರ್ಯ, ರಾಮಚಂದ್ರ ಭಟ್ , ಉಮಾಶಂಕರಿ ಹಾಗು ವಿವಿಧ ಗಣ್ಯರು ಉಪಸ್ಥಿತರಿದ್ದರು.
ಬೆಳಿಗ್ಗೆಯಿಂದ ಪುಟಾಣಿಗಳಿಂದ ಹಾಗೂ ನುರಿತ ಕಲಾವಿದರಿಂದ ಸಂಗೀತ ಸುಧೆ ಜರುಗಿತು. ಕೊರೋನಾ ವಾರಿಯರ್ಸ್ ಡಾ.ಅಭಯನಾರಾಯಣ ಹಾಗೂ ಡಾ.ಶ್ರೀಕರಿ ಅಭಯನಾರಾಯಣ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಮಾರೋಪಣ ಭಾಷಣ ಮಾಡಿದರು.