ದರ್ಪಣ ನೃತ್ಯಸಂಸ್ಥೆ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪೀನ್ವೀಲ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ಅಡಿಯಲ್ಲಿ ಕೃಷ್ಣ-ರಾಧೆ ಪ್ರೇಮದ ಕುರಿತಾಗಿ ನಿರ್ಮಿಸಲಾದ ‘ತು ಹೈ ಕಾಹಂ’ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮ ಗುರುವಾರ ರಾಜ್ಟವರ್ನಲ್ಲಿ ದರ್ಪಣ ನೃತ್ಯಶಾಲೆಯಲ್ಲಿ ನೆರವೇರಿತು. ನಗರಸಭೆ ಸದಸ್ಯೆ ಅಮೃತ ಕೃಷ್ಣಮೂರ್ತಿ ವಿಡಯೋ ಗೀತೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಕಾರ್ಯಕ್ರಮವನ್ನು ಕೃಷ್ಣಮೂರ್ತಿ ಆಚಾರ್ಯ ಉದ್ಘಾಟಿಸಿದರು. ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನರಸಿಂಹ ಮೂರ್ತಿ ಉಪಸ್ಥಿತರಿದ್ದರು. ಜಯತಂತ್ರಿ ಸ್ವಾಗತಿಸಿ, ರಮಾನಂದ ಮೂರ್ತಿ ವಂದಿಸಿದರು. ದರ್ಪಣ ನೃತ್ಯ ಸಂಸ್ಥೆ ಮುಖ್ಯಸ್ಥರಾದ ರಕ್ಷಾ ಉಡುಪಿ, ರಮ್ಯ ಉಡುಪಿ ಪ್ರಾಸ್ತವಿಕ ಮಾತುಗಳನ್ನಾಡಿ, ಕೃಷ್ಣನ ಮೇಲೆ ರಾಧ ಪ್ರೇಮ, ದಾಸ ಭಕ್ತಿ ಭಾವನೆಯನ್ನು ಗಮನದಲ್ಲಿರಿಸಿಕೊಂಡು ಇದನ್ನು ನಿರ್ಮಿಸಲಾಗಿದ್ದು ಯ್ಯೂಟ್ಯೂಬ್ನಲ್ಲಿ ಬಿಡುಗಡೆಗೊಳಿಸಲಾಗಿದೆ ವೀಕ್ಷಿಸಬಹುದು ಎಂದರು.
ಸಾಹಿತ್ಯ, ಪರಿಕಲ್ಪನೆ, ನೃತ್ಯ ಸಂಯೋಜನೆ ರಕ್ಷಾ ಉಡುಪಿ, ರಮ್ಯ ಉಡುಪಿ, ಸಂಗೀತ ಆಕಾಶ್ ಹೆಬ್ಬಾರ್, ವಿಡಿಯೋಗ್ರಫಿ ಅಶ್ವಿನ್ ಹೆಬ್ಬಾರ್, ವಿರಾಜ್ ಕೆ.ಎಡಿಟಿಂಗ್ ನಿರ್ವಹಿಸಿದ್ದಾರೆ.