ಅವರು ರವಿವಾರ ಸುಮನಸಾ ಕೊಡವೂರು ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಂಸ್ಕೃತಿ ನಿರ್ದೇಶನಾಲಯ ನವ ದೆಹಲಿ, ನಗರಸಭೆ ಉಡುಪಿ ಹಾಗೂ ಶ್ರೀ ಪೇಜಾವರ ಅಧೋಕ್ಷಜ ಮಠ ಇವರ ಸಹಯೋಗದೊಂದಿಗೆ ಹಮ್ಮಿ ಕೊಂಡಿರುವ ರಂಗಹಬ್ಬ – 9ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸುಮನಸಾವು ಪ್ರಯೋಗ ರಂಗ, ಸಾಮಾಜಿಕ ನಾಟಕ, ಯಕ್ಷಗಾನದಂತಹ ಸಕ್ರೀಯಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿದೆ.
ಪ್ರಸ್ತುತ ದಿನದ ಸವಾಲಿನ ನಡುವೆಯೂ ರಂಗಹಬ್ಬವನ್ನು ಯಶಸ್ವಿಗೊಳಿಸಿರುವುದು ಸಂಘಟನಾಶಕ್ತಿಯ ಸಾಬೀತೇ ಸರಿ ಎಂದರು. ಈ ಸಂದರ್ಭದಲ್ಲಿ ಯಕ್ಷಗಾನ ಉನ್ನತಿಗೆ ಸದಾ ಶ್ರದ್ಧಾಬದ್ಧರಾಗಿದ್ದ ದಿವಂಗತ ಯು.ದುಗ್ಗಪ್ಪ ಸ್ಮರಣೆ ಯಕ್ಷಸುಮ ಪ್ರಶಸ್ತಿಯನ್ನು ಯಕ್ಷಗಾನ ಗುರು ಬಿರ್ತಿ ಬಾಲಕೃಷ್ಣ ಗಾಣಿಗ ಅವರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ದ.ಕ. ಮತ್ತು ಉಡುಪಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಸಾಫಲ್ಯ ಟ್ರಸ್ಟ್ನ ಪ್ರವರ್ತಕರಾದ ನಿರುಪಮಾ ಶೆಟ್ಟಿ, ಉದ್ಯಮಿ ಹರೀಶ್ ಶ್ರೀಯಾನ್ ಹಾಗೂ ಸುಮನಸಾ ಗೌರವಾಧ್ಯಕ್ಷ ಎಮ್.ಎಸ್.ಭಟ್, ಅಧ್ಯಕ್ಷ ಪ್ರಕಾಶ್ಜಿ.ಕೊಡವೂರು, ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ತಿಕ್ ಹಾಗೂ ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿ ದರು. ನಾಗೇಶ್ ಪ್ರಸಾದ್ ವಂದಿಸಿದರು. ಬಳಿಕ ಸನ್ನಿಧಿ ಕಲಾವಿದರು ಉಡುಪಿ ತಂಡದಿಂದ ಮಾಯೊದ ಬೊಲ್ಲು ನಾಟಕ ಪ್ರದರ್ಶನ ಗೊಂಡಿತು.