ಸ್ನೇಹಜೀವಿ ಉಡುಪಿ ಇದರ ರಂಗ ಶಾಲೆಯ ಯಕ್ಷಗಾನ ಮತ್ತು ನಾಟಕ ರಂಗಭೂಮಿ ವಿದ್ಯಾರ್ಥಿಗಳಿಂದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಕುರ್ಕಾಲು ಶ್ರೀ ಗಣಪತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ ಶಿಕ್ಷಕ, ಹಿರಿಯ ರಂಗಕರ್ಮಿ, ರೋ. ಶ್ರೀ. ಶ್ರೀನಿವಾಸ ರಾವ್ ಕಾಪು ಇವರನ್ನು ಸನ್ಮನಿಸಲಾಯಿತು. ಇವರು ರಂಗ ಭೂಮಿಯ ಮಹತ್ವ, ಅವಶ್ಯಕತೆ, ಉಪಯುಕ್ತತೆ ಗಳ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಕಲಾ ಪೋಷಕ ಚಂದ್ರಪ್ರಕಾಶ್ ಕಾಸರಗೋಡು ಇವರನ್ನು ಗೌರವಿಸಲಾಯಿತು.
ಯುನೈಟೆಡ್ ಕಿಂಗ್ಡಮ್ ರಂಗ ನಟಿ ಹೆಲ್ಲನ್ ಮಿರ್ರೆನ್ ನೀಡಿದ ವಿಶ್ವ ರಂಗ ಭೂಮಿ ದಿನದ 2021ರ ಸಂದೇಶವನ್ನು ಪ್ರಜ್ಞಾ ವಾಚಿಸಿದರು. ವಿದ್ಯಾರ್ಥಿಗಳು ರಂಗಗೀತೆ ಹಾಡಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಆಲ್ವಿನ್ ಪ್ರಕಾಶ್ ಮಿನೇಜಸ್ ಶಂಕರಪುರ , ಕುರ್ಕಾಲ್ ಗಣಪತಿ ಶಾಲೆಯ ಸ್ಥಾಪಕ ಮನೆತನದ ಸದಸ್ಯ ಧೀರಜ್ ಶೆಟ್ಟಿ, ಶಂಕರಪುರ ಜೇಸಿಐ ಅಧ್ಯಕ್ಷೆ ಸಿಮಿ ಡಿಸೋಜ, ಸಮಾಜ ಸೇವಕ ಶಶಿಧರ ಪುರೋಹಿತ ಕಟಪಾಡಿ, ತಂಡದ ವ್ಯವಸ್ಥಾಪಕ ಪ್ರಕಾಶ್ ಆಚಾರ್ಯ ಇನ್ನಂಜೆ , ದಿನಕರ್ ಶೆಣೈ, ಪ್ರಕಾಶ್ ಆಳ್ವ, ಭರತ್ ಶೆಟ್ಟಿ ಕುರ್ಕಾಲ್, ಲಕ್ಷ್ಮೀ, ಶಾಂತಿ,. ಗಣೇಶ್ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು
ಚೈತ್ರ ನಿರೂಪಿಸಿದರು. ಕುಮಾರಿ ಸಂಗೀತ ಸ್ವಾಗತಿಸಿದರು. ಸಂದ್ಯಾ ಪ್ರಸ್ತಾವನೆಗೈದರು, ತಂಡದ ಸಂಚಾಲಕ ಗಣೇಶ್ ರಾವ್ ಎಲ್ಲೂರು ಕಾರ್ಯಕ್ರಮ ಸಂಯೋಜಿಸಿ ಧನ್ಯವಾದ ಅರ್ಪಿಸಿದರು.