ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ಪ್ರಸ್ತುತಿಯಲ್ಲಿ ಈ ಸಮುದಾಯ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ವಿಶ್ವ ಸ್ಥಳೀಕರಣ ದಿನಾಚರಣೆಯ ಪ್ರಯುಕ್ತ 5 ದಿನಗಳ ಕಾಲ ಆನ್ಲೈನ್ನಲ್ಲಿ ‘ವಿಶ್ವ ಕಲಾ ಸಂಭ್ರಮ’ ವನ್ನು ಆಯೋಜಿಸಲಾಗಿದೆ.
ಸೋಶಿಯಲ್ ಮೀಡಿಯಾಗಳಾದ ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಸ್ಥಳೀಯ ಕಲಾವಿದರಾಗಿದ್ದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ,ಜಾದುಗಾರ ಜೂನಿಯರ್ ಶಂಕರ್ , ನಟಿ ಮಾನಸಿ ಸುಧೀರ್, ರೂಬಿಕ್ ಕ್ಯೂಬ್ ಸಾಧಕ ಪೃಥ್ವೀಶ ಭಟ್, ಯೋಗಪಟು ತನುಶ್ರೀ ಪಿತ್ರೋಡಿ ಭಾಗವಹಿಸಲಿದ್ದಾರೆ.
ಈ ಕಲಾ ಸಂಭ್ರಮ ಜೂನ್ 16ರಿಂದ 20ರವರೆಗೆ ಪ್ರತಿದಿನ ಸಂಜೆ 6.00 ರಿಂದ Samskruthi Vishwa ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಳ್ಳಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಹೆಚ್ ಪಿ ತಿಳಿಸಿರುತ್ತಾರೆ.