ನಾಳೆ ನಡೆಯಲಿದೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ‘ಸಲಾಂ ಕಲಾಂ’ ಕಾರ್ಯಕ್ರಮ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಡಾ | ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ.) ಮಣಿಪಾಲದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಕಾರದಲ್ಲಿ ಗುರುವಾರ 28ರಂದು ಮಣಿಪಾಲದ ನಿರ್ಮಿತಿ ಕೇಂದ್ರದಲ್ಲಿ ಸಂಜೆ 5.30 ರಿಂದ ‘ಸಲಾಂ ಕಲಾಂ’ ಡಾ| ಎ.ಪಿ.ಜೆ ಅಬ್ದುಲ್ ಕಲಾಂ ಅವರ ನೆನಪಿನಲ್ಲಿ ‘ಸಲಾಂ ಕಲಾಂ ‘ ಎಂಬ ಕಾರ್ಯಕ್ರಮ ನಡೆಯಲಿದೆ.

ಈ ವೇಳೆ ಕಲಾಂ ರ ಶಿಷ್ಟಾಚಾರ ಹಾಗೂ ಸಮನ್ವಯ ಅಧಿಕಾರಿಯಾಗಿದ್ದ ಜಯಪ್ರಕಾಶ್ ರಾವ್ ಕೆ. ಅವರ ‘ಹಮಾರಾ PRO’ ಪುಸ್ತಕ ಬಿಡುಗಡೆ ಹಾಗೂ ಕಲಾಂ ಅವರಲ್ಲಿ ವೀಣಾವಾದನ ನಡೆಸಿ ಅವರಿಂದ ಗೌರವ ಪಡೆದ ಮಣಿಪಾಲದ ಶ್ರೀಮತಿ ಪವನಾ ಬಿ. ಆಚಾರ್ ಅವರ ವೀಣಾವಾದನ ‘ವೀಣೆ -ಬೆಳಗು- ಬೆಡಗು’ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.

 

 

 
 
 
 
 
 
 
 
 
 
 

Leave a Reply