ಉಡುಪಿ : ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ, ಅದಮಾರು ನರಹರಿತೀರ್ಥ ಸಂಸ್ಥಾನದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರ ಪ್ರಿಯಶಿಷ್ಯರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯಾವಧಿಯ ದೀಕ್ಷಾ ಸಮಾಪನ “ವಿಶ್ವಾರ್ಪಣಮ್” ಉತ್ಸವದಲ್ಲಿ,ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇದರ ಅಂಗವಾಗಿ,ಕರುಣಾಕರ ಶೆಟ್ಟಿ ಇವರ ಸಹಕಾರದೊಂದಿಗೆ ಶ್ರೀಅನಂತ ಪದ್ಮನಾಭ ಯಕ್ಷಗಾನ ಮಂಡಳಿ,ಪೆರ್ಡೂರು ಇವರಿಂದ “ಪಾಂಚಜನ್ಯ ಮತ್ತು ರತ್ನಾವತಿ ಕಲ್ಯಾಣ” ಪ್ರಸಂಗದ ಯಕ್ಷಗಾನ ನಡೆಯಿತು.