ಉಡುಪಿ : ನವ ಚುಗುರುಗಳಲ್ಲಿರುವ ರಂಗಾಸಕ್ತಿ ಪ್ರಸ್ತುತಗೊಳ್ಳಲೆಂದು ಕಾಲೇಜು ವಿದ್ಯಾರ್ಥಿಗಳಿಗಾಗಿ ಸುಮನಸಾ ಕೊಡವೂರು ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾಚ್ 27ರಂದು ಉಡುಪಿ ಅಜ್ಜರ್ಕಾಡು ಭುಜಂಗ ಪಾರ್ಕಿನ ಬಯಲು ರಂಗ ಮಂದಿರದಲ್ಲಿ ಹಮ್ಮಿ ಕೊಂಡಿದ್ದ ಕಿರು ಪ್ರಹಸನ ಸ್ಪರ್ಧೆ ಪರಿಶೋಧ ಇದರ ಪ್ರಥಮ ಸ್ಥಾನವನ್ನು ಪೂರ್ಣ ಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ ಹಾಗೂ ದ್ವಿತೀಯ ಸ್ಥಾನವನ್ನು ಯು.ಪಿ.ಎಮ್.ಸಿ ಕುಂಜಿಬೆಟ್ಟು ಪಡೆಯಿತು.
ತೀರ್ಪುಗಾರರಾಗಿ ರಂಗನಟ ಎಮ್.ಎಸ್.ಭಟ್, ರಂಗನಿರ್ದೇಶಕ ವಿದ್ದು ಉಚ್ಚಿಲ್, ಪರ್ತಕರ್ತ ಬಾಲಕೃಷ್ಣ ಶಿರ್ಬಾಲ ಭಾಗವಹಿಸಿದರು. ದಿವಾಕರ್ ಕಟೀಲ್ ಸ್ಪರ್ಧೆಯನ್ನು ನಿರ್ವಹಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮನಿರ್ವಹಿಸಿದರು.