“ಪರ್ಯಾಯಪಂಚಶತಮಾನೋತ್ಸವ”ದ ಸಮಾರೋಪ ಸಮಾರಂಭ

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, “ಪರ್ಯಾಯಪಂಚಶತಮಾನೋತ್ಸವ”ದ ಸಮಾರೋಪ ಸಮಾರಂಭ ಶನಿವಾರ ನಡೆಯಿತು.

ಪರ್ಯಾಯ ಪೀಠಾಧೀಶ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.ಈ ಸಂದರ್ಭದಲ್ಲಿ ಅಭ್ಯಾಗತರಾಗಿ ಆನೆಗುಡ್ಡೆ ಶ್ರೀವಿನಾಯಕ ದೇವಳದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾದ್ಯಾಯ ಮತ್ತು ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ತಮಿಳುನಾಡಿನ ಬಿ.ಜೆ.ಪಿ.ಯ ಉಪಾಧ್ಯಕ್ಷ ಅಣ್ಣಾಮಲೈ ಉಡುಪಿಗೆ ಬರಲಾಗದ ಕಾರಣ ವೀಡಿಯೋ ಸಂದೇಶ ನೀಡಿದರು.

 

ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ,ದಿ.ಕೆ.ಕೆ.ಪೈ ಇವರ ಸ್ಮರಣಾರ್ಥ ಅವರ ಮೊಮ್ಮಗ ಅಶ್ವಿನ್, ದಿ.ವಿಜಯನಾಥ ಶೆಣೈ ಇವರ ಸ್ಮರಣಾರ್ಥ ಪುತ್ರಿ ಅನುರೂಪಾ ಶೆಣೈ ಇವರಿಗೆ,ದಿ.ದೇವರಾಜ ಇವರ ಸ್ಮರಣಾರ್ಥ ಅವರ ಪುತ್ರ ರಾಜೇಶ್ ರಾವ್,ದಿ.ಟಿ.ವಿ.ರಾವ್ ಇವರ ಸ್ಮರಣಾರ್ಥ ಅವರ ಪುತ್ರ ಡಾ.ಶ್ರೀನಿವಾಸ ರಾವ್,ಮೂಡಬಿದ್ರೆಯ ದಿ.ಅಮರನಾಥ ಶೆಟ್ಟಿ ಸ್ಮರಣಾರ್ಥ ಧರ್ಮಪತ್ನಿ ಜಯಶ್ರೀ ಗೆ ,ದಿ.ಕೆ.ವಿ.ಬಿಳಿರಾಯ ಸ್ಮರಣಾರ್ಥ ಅವರ ಪುತ್ರ ಸುರೇಶ ಬಿಳಿರಾಯ ಉಡುಪಿಗೆ, ಕುಂದಾಪುರದ ಮಾಜಿ ಶಾಸಕರ ಏ.ಜಿ.ಕೊಡ್ಗಿ,ಅಪ್ಪಣ್ಣ ಹೆಗ್ಡೆ,ಉಡುಪಿಯ ಸೋಮಶೇಖರ ಭಟ್,ಗುಜ್ಜಾಡಿ ಪ್ರಭಾಕರ ನಾಯಕ್,ಯು.ಕೆ.ರಾಘವೇಂದ್ರ ರಾವ್,ಪ್ರೊ.ಎಂ.ಎಲ್.ಸಾಮಗ,ಮಲ್ಪೆ ಇವರಿಗೆ ಪರ್ಯಾಯ ಶ್ರೀಪಾದರು ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಿದರು.

 
 
 
 
 
 
 
 
 
 
 

Leave a Reply