ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್ ಸಾಮಗರವರು ನಾಲ್ವರು ಕಲಾ ಸಾಧಕರಾದ ವಸಂತಿರಾಮ್ ಭಟ್, ಪ್ರತಿಭಾ.ಎಲ್ ಸಾಮಗ, ಎಂ.ಎಸ್ ಭಟ್ ಮತ್ತು ಸುಹೀಲ್ ರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದನಾ ನುಡಿಯನ್ನಾಡಿದರು.
ಚಂದ್ರಶೇಖರ್ ರಾವ್ ನಿರೂಪಿಸಿದರು. ಕಿರಣ್ ರಾವ್ ಪ್ರಾರ್ಥಿಸಿದರು. ಚೈತನ್ಯ ಎಂ.ಜಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯನಿಕೇತನ ಕೊಡವೂರು ಕಲಾವಿದರಿಂದ ನೃತ್ಯಾಂತ್ಯಾಕ್ಷರಿ ನಡೆಯಿತು.