ನೃತ್ಯನಿಕೇತನ​ ​ಕೊಡವೂರು ಸಂಸ್ಥೆ​ಯಿಂದ ​ಕೃಷ್ಣಪ್ರೇಮ ಪ್ರಶಸ್ತಿ ಪ್ರದಾನ

ಕೊಡವೂರು ವಿಪ್ರಶ್ರೀ ಸಭಾಂಗಣದಲ್ಲಿ ನೃತ್ಯನಿಕೇತನ​ ​ಕೊಡವೂರು  ಸಂಸ್ಥೆ​ಯಿಂದ ಕೊಡಮಾಡುವ  ​ಕೃಷ್ಣಪ್ರೇಮ ಪ್ರಶಸ್ತಿ ಪ್ರದಾನ​ ಸಮಾರಂಭ ಜರಗಿತು.  
ಅಧ್ಯಕ್ಷತೆ ​ವಹಿಸಿದ್ದ ​ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ​. ಎಂ.ಎಲ್ ಸಾಮಗರವರು ನಾಲ್ವರು ಕಲಾ ಸಾಧಕ​ರಾದ  ವಸಂತಿರಾಮ್ ಭಟ್,​ ​ಪ್ರತಿಭಾ.ಎಲ್ ಸಾಮಗ,​ ​ಎಂ.ಎಸ್ ಭಟ್ ಮತ್ತು ಸುಹೀಲ್ ರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದನಾ ನುಡಿಯನ್ನಾಡಿದರು.​ 
ಮುಖ್ಯ ಅತಿಥಿಗಳಾಗಿ ವಿಶ್ವನಾಥ್ ಶೆಣೈ​ ​ಮತ್ತು ಕುಮಾರ​ ​ಬೆಕ್ಕೇರಿಯವರು​,  ವಿದುಷಿ ಮಾನಸಿ ಸುಧೀರ್ ಉಪಸ್ಥಿತರಿದ್ದರು​. ನೃತ್ಯನಿಕೇತನ ಕೊಡವೂರಿನ ನಿರ್ದೇಶಕ​ ​ವಿದ್ವಾನ್ ಸುಧೀರ್ ಸ್ವಾಗತಿಸಿದರು​.
 ಚಂದ್ರಶೇಖರ್ ರಾವ್ ನಿರೂಪಿಸಿದರು.​ ​ಕಿರಣ್ ರಾವ್ ಪ್ರಾರ್ಥಿಸಿದರು​. ​ ಚೈತನ್ಯ ಎಂ.ಜಿ ​ವಂದಿಸಿದರು.  ​ಸಭಾ ಕಾರ್ಯಕ್ರಮದ ಬಳಿಕ ನೃತ್ಯನಿಕೇತನ​ ​ಕೊಡವೂರು ಕಲಾವಿದರಿಂದ ನೃತ್ಯಾಂ​​ತ್ಯಾಕ್ಷರಿ ​​ನಡೆಯಿತು.
 
 
 
 
 
 
 
 
 
 
 

Leave a Reply