ಎಮ್.ಎಸ್.ಗಿರಿಧರ್ ಹಾಗು ವಸುಧಾ.ಜಿ ದಂಪತಿಗಳಿಂದ “ಪಂಚಗಾನ ಸೇವೆ”

ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವೀ ಸನ್ನಿಧಿಯಲ್ಲಿ ಮಂಗಳವಾರ ಸಂಜೆ ಖ್ಯಾತ ಸಂಗೀತ ನಿರ್ದೇಶಕ, ಸುಗಮ ಸಂಗೀತ ಗುರುತಿಲಕ ಎಮ್.ಎಸ್.ಗಿರಿಧರ್ ಬೆಂಗ​ಳೂರು ಮತ್ತು ಮಧುರ ಕಂಠದ ಗಾಯಕಿ ವಸುಧಾ ಜಿ.ರವರು “ದಾಸ ಸಿಂಚನ” ಕಾರ್ಯಕ್ರಮದಲ್ಲಿ ತಿರುಪತಿ ಶ್ರೀನಿವಾಸನ ಸನ್ನಿಧಿಯಲ್ಲಿ ಉಯ್ಯಾಲೆ ಉತ್ಸವದಲ್ಲಿ ಹಾಡಿದ ದಾಸರ ಕವಿತೆಗಳನ್ನು ಹಾಡುವ ಮೂಲಕ “ಪಂಚಗಾನ ಸೇವೆ” ಸಲ್ಲಿಸಿದರು.ಈ ಸಂದರ್ಭದಲ್ಲಿ ಶ್ರೀದೇವಳದ ಆಡಳಿತ ಮೊಕ್ತೇಸರ ಶಶಿಧರ್ ವಾಗ್ಲೆ, ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ಶ್ರೀದೇವಳದ ವತಿಯಿಂದ ಪ್ರಸಾದ ನೀಡಿ ಗೌರವಿಸಿದರು. ಅಲೆವೂರು ಶ್ರೀಕಾಂತ ನಾಯಕ್ ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply