ಕವಿ ಮುುದ್ದಣ್ಣರ 151ನೇ ಜನ್ಮ ದಿನಾಚರಣೆ

ಉಡುಪಿ: ಕನ್ನಡ ಸಾಹಿತ್ಯಲೋಕದ ಮಹಾಕವಿ, ಖ್ಯಾತ ಕವಿ ಮುದ್ದಣ್ಣ(ನಂದಳಿಕೆ ಲಕ್ಷ್ಮೀನಾರಾಯಣಪ್ಪ) ಅವರ 151ನೇ ಜನ್ಮ ದಿನದ ಪ್ರಯುಕ್ತ ಉಡುಪಿ ನಗರಸ ವತಿಯಿಂದ ಗೌರವ ಸಲ್ಲಿಸಲಾಯಿತು.

ನಗರಸಭೆ ಮುಂಭಾಗದಲ್ಲಿರುವ ಕವಿ ಮುದ್ದಣ್ಣರ ಪ್ರತಿಮೆಗೆ ನಗರಸಭಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಅವರು ಮಾಲಾರ್ಪಣೆ ಮಾಡುವುದರ ಮೂಲಕ ಉಡುಪಿಯ ಹಿರಿಯ ಕವಿಗೆ ಗೌರವವನ್ನು ಅರ್ಪಿಸಲಾಯಿತು. ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಗಿರೀಶ್ ಅಂಚನ್, ನಗರಸಭಾ ಸದಸ್ಯ ಶ್ರೀ ಸಂತೋಷ್ ಜತ್ತನ್, ಶ್ರೀಮತಿ ರಜನಿ ಹೆಬ್ಬಾರ್, ನಗರ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply