ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ದಿನಾಂಕ ಆಗಸ್ಟ್ 29, ಆದಿತ್ಯವಾರದದಂದು ಪುರಂದರ ದಾಸರ ರಚನೆ ಹರಿಕುಣಿದಾ ನಮ್ಮ ಹರಿ ಕುಣಿದಾ ಭಕ್ತಿಗೀತೆ ವಿಭಿನ್ನ ರೀತಿಯ ವಿಡಿಯೋ ಆಲ್ಬಮ್ ಬಿಡುಗಡೆಗೊಳ್ಳಲಿದೆ..
ಕಳೆದ ಬಾರಿ ಕನಕ ದಾಸರ ” ಈ ಶನಿನ್ನ ಚರಣ ಹಾಗೂ ತೋಳು ರಂಗ” ಜಗದೀಶ್ ಪುತ್ತೂರು ಇವರ ಯೂಟ್ಯೂಬ್ ಚಾನಲ್ ನಲ್ಲಿ ಮಿಲಿಯನ್ ಗಟ್ಟಲೆ ಸಂಗೀತ ಪ್ರಿಯರ ವಿವ್ಸ್ ಪಡೆದ ಮೊದಲ ಆಲ್ಬಮ್ ಆಗಿತ್ತು.
2ನೆ ವರ್ಷದ ಕಾಣಿಕೆ. ಪುರಂದರ ದಾಸರ ರಚನೆಯ “ಹರಿಕುಣಿದಾ ನಮ್ಮ ಹರಿ ಕುಣಿದಾ”. ಈ ಭಕ್ತಿಗೀತೆ ಎಲ್ಲಾ ಭಜನಾ ತಂಡಕ್ಕೆ ಭಜನೆ ಹೇಳುವ ರೀತಿಯಲ್ಲಿ ಭಜಕರಿಗಾಗಿಯೇ ತಯಾರಿಸಿದ ಭಕ್ತಿಗೀತೆ.
ಸಂಗೀತದೊಂದಿಗೆ ಕುಣಿದು (ನೃತ್ಯ) ಹಾಡುವ ಮಕ್ಕಳಿಗೆ ಹೇಳಿ ಮಾಡಿಸಿದಂತಿದೆ ಈ ಹಾಡು. ಈ ಆಲ್ಬಮ್ ನ ನಿರ್ಮಾಣ ದಿ. ಶಾಮಣ್ಣ ನಾರಾಯಣಪ್ಪ ಶ್ರೀಮತಿ ಕೌಸಲ್ಯ ಕೊಂಡಂದ ರಾಮುಲು ಮತ್ತು ಫ್ಯಾಮಿಲಿ ನಿರ್ಮಾಣ ಮಾಡಿದ್ದಾರೆ. ಈ ವಿಡಿಯೋ ಆಲ್ಬಮ್ ನಲ್ಲಿ ಮೂವರು ಗಾಯಕಿಯರು ಅಲ್ಲದೆ ಆರು ಪುಟ್ಟ ಮಕ್ಕಳು ರಾಧಾ ಕೃಷ್ಣ ರಾಗಿ ಈ ಭಕ್ತಿಗೀತೆಗೆ ನೃತ್ಯದದ ಮೂಲಕ ಸಾಥ್ ನೀಡಿದ್ದಾರೆ. ನೋಡುಗರ ಮನಸಿಗೆ ಮುದ ನೀಡುವಲ್ಲಿ ಸಂಶಯವಿಲ್ಲ.
ವಿಡಿಯೋ ಆಲ್ಬಮ್ ನ್ನು ಕಟಪಾಡಿ ಶ್ರೀ ದ್ವಾರಕಾಮಯಿ ಸಾಯಿ ಮಂದಿರದಲ್ಲಿ ಶ್ರೀಸಾಯಿ ಈಶ್ವರ್ ಗುರೂಜಿಯವರು ಬಿಡುಗಡೆ ಗೊಳಿಸಲಿದ್ದಾರೆ. ಗಾಯಕಿರಾಗಿ ವಿದ್ಯಾಸುವರ್ಣ, ಸಮನ್ವಿ ರೈ, ಸಾಹಿತ್ಯ ಅಚಾರ್ಯ ಪುತ್ತೂರ್ ಮತ್ತು ಪುಟ್ಟ ಕಲಾವಿದರಾಗಿ ಜ್ಞಾನ ರೈ ಕುರಿಯ, ಆಜ್ಞಾ ರೈ ಕುರಿಯ. ಸಾತ್ವಿ ಜಿ ರೈ ಈಶ್ವರ ಮಂಗಲ, ಅಧಿತ್ರಿ ಅಚಾರ್ಯ, ವೃತಿಕ ಕಾಮತ್ಅ, ರ್ಚನ ಸಂಪ್ಯಾಡಿ, ಹಾಗೂ ಹಾಡಿನ ಛಾಯಾಗ್ರಹಣ ಅರುಣ್ ರೈ ಮತ್ತು ಸಂಕಲನ ಜೆಪಿ ಬಂದ್ಯೋಡ್, ಮೇಕಪ್ ಪ್ರೇಮ್ ರಾಜ್ ಆರ್ಲ ಪದವು ಮಾಡಿದ್ದಾರೆ.