ಯುವ ಭಾರತ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಚಂದ್ರಹಾಸ ಸುವರ್ಣ, ಉಪಾಧ್ಯಕ್ಷರಾಗಿ ಕೆ.ಸನ್ಮತ್ ಹೆಗ್ಡೆ ಆಯ್ಕೆ

ನೂತನವಾಗಿ ಆರಂಭಗೊಂಡ ಯುವ ಭಾರತ್ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ ಚುನಾವಣೆಯು ಸಂಸ್ಥೆಯ ಕಛೇರಿಯಲ್ಲಿ ದಿನಾಂಕ 14.02 2023 ರಂದು ನಡೆಯಿತು. ಸಂಸ್ಥೆಯ ನಿರ್ದೇಶಕರಾಗಿ ಡಾ. ಅವಿನ್ ಬಿ.ಆರ್ ಆಳ್ವಾ, ಮಧುಕರ್ ವಿ ಎಸ್, ಡಾ.ಬೇಲಾಡಿ ಸಮೀರ್ ಮಾಡ, ಸೂರ್ಯನಾರಾಯಣ ಉಡುಪ, ಆಶಿಶ್ ಶೆಟ್ಟಿ, ಕೆ.ವಿಜಯ್ ಕುಮಾರ್ ಶೆಟ್ಟಿ ಯಡ್ತಾಡಿ, ಡಾ. ಮಹಾಬಲೇಶ್ ಶೆಟ್ಟಿ, ಅಕ್ಷತಾ ಆರ್, ರೋಹಿನಿ ಆರ್. ಆಚಾರ್ಯ, ರೋಹನ್ ಆಚಾರ್ಯ, ಅಭಿಷೇಕ್ ಸುವರ್ಣ ಆಯ್ಕೆಯಾದರು. ಯುವ ಭಾರತ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಡಳಿತ ಕಛೇರಿಯು 23.02.2023ರ ಗುರುವಾರದಂದು ಶಾಂಭವಿ ಹೆರಿಟೇಜ್ ಎಲ್ಐಸಿ ಕಛೇರಿ ಮುಂಭಾಗ ಪೆರ್ವಾಜೆ ರೋಡ್ ಕಾರ್ಕಳದಲ್ಲಿ ಉದ್ಘಾಟನೆಗೊಳ್ಳಲಿದೆ.

 
 
 
 
 
 
 
 
 
 
 

Leave a Reply