ಶ್ರೀ ಕೃಷ್ಣ ಬಾಲನಿಕೇತನದಲ್ಲಿ ವಿಶ್ವಯೋಗ ದಿನ ಆಚರಣೆ

ಉಡುಪಿ: ರೋಟರಿ ಉಡುಪಿ, ಶ್ರೀ ಕೃಷ್ಣ ರೋಟರಾಕ್ಟ್ ಇಂಟರಾಕ್ಟ್ , ಶ್ರೀ ಕೃಷ್ಣ ಬಾಲನಿಕೇತನ ಮತ್ತು ಚೈಲ್ಡ್ ಲೈನ್ ಉಡುಪಿ ಜಂಟಿಯಾಗಿ ವಿಶ್ವಯೋಗ ದಿನವನ್ನು ಕುಕ್ಕಿಕಟ್ಟೆ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಆಚರಿಸಲಾಯಿತು.

ಯೋಗ ಗುರು ರೋ. ಸಂಧ್ಯಾ ಕಾಮತ್ ವಿವಿಧ ಆಸನಗಳನ್ನು ಮತ್ತು ಸೂರ್ಯ ನಮಸ್ಕಾರವನ್ನು ವಿವರಣೆ ಸಹಿತ ಮಾಡಿಸಿದರು. ರೋಟರಿ ಅಧ್ಯಕ್ಷೆ ರೋ.ರಾಧಿಕಾ ಲಕ್ಷ್ಮೀನಾರಾಯಣ ಯೋಗಗುರುಗಳನ್ನು ಸನ್ಮಾನಿಸಿದರು. ರೋಟರಿ ಕಾರ್ಯದರ್ಶಿ ರೋ.ದೀಪಾ ಭಂಡಾರಿ, ರೋಟರಾಕ್ಟ ಅಧ್ಯಕ್ಷೆ ರೋ.ಶೃತಿ ಶೆಣೈ, ಚೈಲ್ಡ್ ಲೈನ್ ನಿರ್ದೇಶಕ ರೋ.ರಾಮಚಂದ್ರ ಉಪಾಧ್ಯಾಯ, ರೋ.ದಿನೇಶ್ ಭಂಡಾರಿ, ರೋ. ಗುರುರಾಜ ಭಟ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply