ಉಡುಪಿ: ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ವಿಪ್ರ ಸಮಾಜದಲ್ಲಿ ಅನಾರೋಗ್ಯದಿಂದ ಸಂಕಷ್ಟದಲ್ಲಿರುವ ಮನೆಯವರಿಗೆ ತಲಾ 10000/-ದಂತೆ ಆರ್ಥಿಕ ಸಹಾಯವನ್ನೂ, ಅಗತ್ಯ ಇರುವ ಮನೆಗೆ ಗ್ಯಾಸ್ ಸಂಪರ್ಕವನ್ನೂ ದಾನಿಗಳ ಸಹಕಾರದಿಂದ ನೀಡಲಾಯಿತು.
ಪರಿಷತ್ ಅಧ್ಯಕ್ಷ ವಿಷ್ಣು ಪ್ರಸಾದ್ ಪಾಡಿಗಾರ್ ಪ್ರಸ್ತಾವಿಕದಲ್ಲಿ ಸಂಸ್ಥೆ ವಿಪ್ರ ಸಮಾಜಕ್ಕಾಗಿ ನಡೆಸುತ್ತಿರುವ ಕೋವಿಡ್ ಸಹಾಯವಾಣಿ ಯ ಬಗ್ಗೆಯೂ ಅರಿವು ಮೂಡಿಸಿ ಬಳಿಕ ಸ್ವಾಗತಿಸಿದರು.ಮುಖ್ಯ ಅಥಿತಿಗಳಾಗಿ ರಘುಪತಿ ರಾವ್ ಕಿನ್ನಿಮುಲ್ಕಿ,ವಿವೇಕ್ ಪಾಂಗಣ್ಣಾಯ ಉಪಸ್ಥಿತರಿದ್ದು ನೆರವಿನ ಚೆಕ್ ನೀಡಿದರು. ಕಾರ್ಯದರ್ಶಿ ಪ್ರವೀಣ್ ಉಪಾಧ್ಯ ನಿರೂಪಿಸಿ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ವಂದಿಸಿದರು.