ಉಡುಪಿ : ವಿಶ್ವಾರ್ಪಣಮ್’ ಸಮಾರಂಭದಲ್ಲಿ ಶ್ರೀಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಮಹಾಸ್ವಾಮೀಜಿ ಭಾಗಿ

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ,ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಹಿರಿಯ ವಿದ್ವಾಂಸ ಎಂ.ನಾರಾಯಣಾಚಾರ್ಯ ಹಾಗೂ ಪೌರಕಾರ್ಮಿಕ ತಾರಾಮಿ ಬಾಯಿ ಮತ್ತು ಲಕ್ಷ್ಮಣ ಸನ್ಮಾನಿಸಲಾಯಿತು.

ಪಟ್ಟಣಗಲ್ಲಿ ಮಲ ಹೊರುವ ಪದ್ದತಿ ಆರಂಭಿಸಿದವರು ಬ್ರಿಟಿಷರು,ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲವು ಘಾತಕ ಶಕ್ತಿಗಳು ಅದನ್ನು ಮೇಲ್ವರ್ಗದವರ ತಲೆಗೆ ಕಟ್ಟಿ ಸಮಾಜದಲ್ಲಿ ಒಡಕುಂಟು ಮಾಡಿದರು ಎಂದು ಅನುಗ್ರಹಿಸಿದರು.
ತುಮಕೂರಿನ ಶ್ರೀಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಮಹಾಸ್ವಾಮೀಜಿ,ಮೌಲಿಕ ಶಿಕ್ಷಣದಿಂದಲೇ ದೇಶದ ಬೆಳವಣಿಗೆ ಸಾಧ್ಯ,ಶಾಲೆ ಮತ್ತು ಮನೆ ಎರಡೂ ವಾತಾವರಣಗಳಲ್ಲಿ ಕೂಡ ಮಕ್ಕಳ ಕಲಿಕೆಯ ಮುಖ್ಯ ಕಾರಣಗಳು.ಅದಮಾರು ಮಠದ ಶೈಕ್ಷಣಿಕ ವ್ಯವಸ್ಥೆ ಈ ದಿಸೆಯಲ್ಲಿ ಶ್ರೀವಿಬುಧೇಶತೀರ್ಥರ ಆಶೀರ್ವಾದದೊಂದಿಗೆ ಮುಂದುವರಿಯುತ್ತಿದೆ ಎಂದರು.


ವಿಶ್ವವಾಣಿ ದಿನಪತ್ರಿಕೆಯ ಅಂಕಣಕಾರ ಟಿ.ದೇವಿದಾಸ್ ಸ್ವಾತಂತ್ರ್ಯೋತ್ತರ ಶಿಕ್ಷಣ ಪದ್ಧತಿ”ಯ ಕುರಿತು ಮತ್ತು ಪರ್ಯಾಯ ಶ್ರೀಪಾದರ ಪರಮಗುರುಗಳಾದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ರೂವಾರಿಗಳಾದ ಶ್ರೀವಿಬುಧೇಶತೀರ್ಥ ಶ್ರೀಪಾದರ ದೂರದರ್ಶಿತ್ವವನ್ನು ನೆನಪಿಸಿ ವಿಶೇಷ ಉಪನ್ಯಾಸ ನೀಡಿದರು.


ಸಮಾಜ ಸೇವೆಗಾಗಿ ಡಾ.ವಿ.ಎಸ್.ಆಚಾರ್ಯ ರಿಗೆ ಮರಣೋತ್ತರ ಪ್ರಶಸ್ತಿಯನ್ನು ಅವರ ಸುಪುತ್ರ ಡಾ.ರವಿರಾಜ ಆಚಾರ್ಯರಿಗೆ ನೀಡಲಾಯಿತು.
ಚೆನ್ನೈ ನ ವುಡ್ ಲ್ಯಾಂಡ್ ಹೋಟೆಲಿನ ಮಾಲೀಕರಾದ ಕೆ.ಲಕ್ಷ್ಮೀನಾರಾಯಣ ರಾಯರನ್ನು ಮತ್ತು ಉಡುಪಿ ಹೋಂ ನ ಮಾಲೀಕ ರಾಮಪ್ರಸಾದ ಭಟ್ ರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು. ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು.ಮಠದ ಆಸ್ಥಾನ ವಿದ್ವಾಂಸರಾದ ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply