ರೆಮಿಡಿಸಿವರ್ ಕಳ್ಳ ಮಾರಾಟ ದಂಧೆ ಬೇಧಿಸಿದ್ದ ಕಾತ್ಯಾಯಿನಿ ಆಳ್ವ ಅಮಾನತು – ಉಡುಪಿ ತಾಲೂಕು ಬಂಟರ ಸಂಘ ಖಂಡನೆ

ಉಡುಪಿ: ಬೆಂಗಳೂರಿನಲ್ಲಿ ರೆಮಿಡಿಸಿವರ್ ಕಳ್ಳ ಮಾರಾಟ ದಂಧೆ ಬೇಧಿಸಿರುವ ಸಂಜಯನಗರದ ಪೊಲೀಸ್ ಇನ್ಸ್ಪೆಕ್ಟರ್ ಕಾತ್ಯಾಯಿನಿ ಆಳ್ವ ಅವರನ್ನು ಅಮಾನತುಗೊಳಿಸಲಾಗಿದೆ. ಇದನ್ನು ಉಡುಪಿ ತಾಲೂಕು ಬಂಟರ ಸಂಘ ಖಂಡಿಸಿದೆ.

ಪ್ರಕರಣವನ್ನು ಕೇವಲ ಮೂರು ದಿನದಲ್ಲಿ ಬೇಧಿಸಿ ಸರ್ವರ ಪ್ರಶಂಸೆಗೆ ಪಾತ್ರರಾಗಿದ್ದ ಆಳ್ವ ವಿರುದ್ಧ ಷಢ್ಯಂತ್ರ ರೂಪಿಸಿ ಅಮಾನತು ಮಾಡಲಾಗಿದೆ. ಕೂಡಲೇ ಅಮಾನತು ಆದೇಶ ಹಿಂಪಡೆಯಬೇಕು ಎಂದು ಉಡುಪಿ ತಾಲೂಕು ಬಂಟರ ಸಂಘ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ ಮತ್ತು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಕಾತ್ಯಾಯನಿ ಆಳ್ವ ಪ್ರಾಮಾಣಿಕ ಅಧಿಕಾರಿಯಾಗಿದ್ದರು, ಅವರನ್ನು ಅಮಾನತುಗೊಳಿಸುವ ಮೂಲಕ ಬಂಟ ಸಮುದಾಯಕ್ಕೆ ಸರ್ಕಾರ ಅವಮಾನ ಮಾಡಲಾಗಿದೆ.ಕೂಡಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ ಅಮಾನತು ಆದೇಶ ಹಿಂಪಡೆಯಬೇಕು ಎಂದು ಸಂಘ ಆಗ್ರಹಿಸಿದೆ.

 
 
 
 
 
 
 
 
 
 
 

Leave a Reply