ತುಳುಕೂಟದ ವತಿಯಿಂದ ಸಾಧಕರಿಗೆ ಅಭಿನಂದನೆ

ಉಡುಪಿ, ಸ. 7: ಉಡುಪಿ ತುಳುಕೂಟದ ವತಿಯಿಂದ ರವಿವಾರ ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌ ಅವರನ್ನು ಅಭಿನಂದಿಸಲಾಯಿತು.
ಆದೇ ರೀತಿ ಸಂಘಟನೆ ಸದಸ್ಯರಾಗಿದ್ದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಹಾಬಲ ಶೆಟ್ಟಿ,  ಸುಭಾಶ್ಚಂದ್ರ ವಾಗ್ಲೇ, ಗೋಪಾಲ ಸಿ.ಬಂಗೇರ ಹಾಗು ಕರಾವಳಿ ಇ ಧ್ವನಿ ಪುರಸ್ಕೃತರಾದ ಜನಾರ್ದನ ಕೊಡವೂರು ಅವರನ್ನು ಅಭಿನಂದಿಸಲಾಯಿತು.
ಬನ್ನಂಜೆ ಬಾಬು ಅಮೀನ್‌ ಮಾತನಾಡಿ, ನನಗೆ ದೊರೆತ ಈ ಪ್ರಶಸ್ತಿಯು ಇಡೀ ತುಳುನಾಡಿಗೆ ಸಂದ ಗೌರವ ಆಗಿದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು.
ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಉಪಾಧ್ಯಕ್ಷರಾದ ಮನೋರಮಾ ಶೆಟ್ಟಿ. ಸದಾಶಿವ ಭಟ್‌, ಕೋಶಾಧಿಕಾರಿ ಚೈತನ್ಯ ಎಂ.ಜಿ. ಮೊದಲಾದವರು ಉಪಸ್ಥಿತರಿದ್ದರು. 
ಮುಹಮ್ಮದ್‌ ಮೌಲಾ ಸ್ವಾಗತಿಸಿ ರತ್ನಾಕರ ಇಂದ್ರಾಳಿ ಹಾಗೂ ಪ್ರಭಾಕರ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಶೆಟ್ಟಿ ನಿಡಂಬೂರು ಧನ್ಯವಾದವಿತ್ತರು 
 
 
 
 
 
 
 
 
 

Leave a Reply