ಜಯಪ್ರಕಾಶ್ ಪುತ್ತೂರು ರವರು ಬರೆದ ಫೆಸ್ ಬುಕ್ ಪ್ರಪಂಚ ಶ್ರೀ ಸಾಮಾನ್ಯರು ಬಹುಮಾನ್ಯರು ಪುಸ್ತಕದ ಬಿಡುಗಡೆ

ಉಡುಪಿ : ಖ್ಯಾತ ಲೇಖಕರು, ಮಾಜಿ ರಾಷ್ಟ್ರಪತಿ ಕಲಾಂ ರವರ ಶಿಷ್ಟಾಚಾರ ಅಧಿಕಾರಿಯಾಗಿದ್ದ ಜಯಪ್ರಕಾಶ್ ಪುತ್ತೂರು ರವರು ಬರೆದ ಫೆಸ್ ಬುಕ್ ಪ್ರಪಂಚ ಶ್ರೀ ಸಾಮಾನ್ಯರು ಬಹುಮಾನ್ಯರು ಪುಸ್ತಕದ ಬಿಡುಗಡೆ ಫೆ.20 ರಂದು ಉಡುಪಿ ತುಳುಕೂಟದ ವತಿಯಿಂದ ಎಂ.ಜಿ.ಎಂ ಕಾಲೇಜಿನಲ್ಲಿ ನಡೆದ ಕೆಮ್ತೂರು ತುಳು ನಾಟಕ ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ನಡೆಯಿತು.
ಜಯಪ್ರಕಾಶ್ ರವರು ನಾಡಿನ 55 ಜನ ಸಾಧಕರ ಜೀವನಗಾಥೆಯ ಕುರಿತು ಬರೆದ ಈ ಪುಸ್ತಕದಲ್ಲಿ ಉಡುಪಿ ಜಿಲ್ಲೆಯ 13 ಜನ ಸಾಧಕರ ಸಾಧನೆ ವಿವರ ಬಳಗೊಂಡಿದೆ.

ಲಾಕ್ ಡೌನ್ ಅವಧಿಯಲ್ಲಿ ಬರೆದ ಈ ಪುಸ್ತಕ ಬಿಡುಗಡೆಗೊಂಡಿರುವುದು ಅಭಿನಂದನೀಯ ಎಂದು ತುಳು ಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಈ ಸಂದಭ೯ದಲ್ಲಿ ಡಾII ಭಾಸ್ಕಾರಾನಂದ ಕುಮಾರ್, ಉದ್ಯಮಿ ಪುರುಷ್ಶೋತಮ ಶೆಟ್ಟಿ, ಕನ್ನಡ ಸಂಸ್ಕೃತಿ ಇಲಾಖೆಯ ಪೂಣಿ೯ಮಾ, ಡಾ” ದೇವಿದಾಸ್ ನಾಯ್ಕ, ಗಂಗಾಧರ ಕಿದಿಯೂರು, ಚೈತನ್ಯ ಎಂ, ಪ್ರಭಾಕರ ಭಂಡಾರಿ, ವಿಜಯಕುಮಾರ್, ಸಮೊ೯ತ್ತಮ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply